ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೆ ಏಕೆ?

Last Updated 15 ಜನವರಿ 2016, 19:31 IST
ಅಕ್ಷರ ಗಾತ್ರ

‘ಬನವಾಸಿ ಕದಂಬೋತ್ಸವಕ್ಕೆ ಕುತ್ತು’ ಲೇಖನ (ಪ್ರ.ವಾ., ಜ. 9) ಓದಿ ಆಶ್ಚರ್ಯವಾಯಿತು. ಸಾಂಸ್ಕೃತಿಕ ಹಬ್ಬಗಳು ಸರ್ಕಾರಕ್ಕೆ ಈಗ ಏಕೋ ಅಪಥ್ಯವಾಗುತ್ತಿವೆ. ಎಲ್ಲದಕ್ಕೂ ಬರಗಾಲದ ನೆಪ! ವಿಧಾನ ಪರಿಷತ್‌ ಚುನಾವಣೆಗೆ ಬರ ಅಡ್ಡ ಬರಲಿಲ್ಲ. ಚುನಾವಣೆಯಲ್ಲಿ ರಾಜಾರೋಷವಾಗಿ ಹಣ ಹಂಚಲು ಬರ  ತೊಡಕಾಗಲಿಲ್ಲ. ಶಿಲಾನ್ಯಾಸ, ಉದ್ಘಾಟನಾ ಸಮಾರಂಭಗಳಿಗೆ ಬರದಿಂದ ತೊಂದರೆಯಾಗದು.  ಉತ್ಸವ, ಸಾಂಸ್ಕೃತಿಕ ಹಬ್ಬಗಳಿಗೆ ಮಾತ್ರ ಏಕೆ ಬರೆ?

ಬರದ ಹೆಸರಲ್ಲಿ  ದಸರಾ ಸೊರಗಿತು. ಅದರಿಂದ ಪ್ರವಾಸೋದ್ಯಮ ಕೊರಗಿತು.  ಉತ್ತರ ಕರ್ನಾಟಕದ ಬಾದಾಮಿ ಉತ್ಸವ, ಲಕ್ಕುಂಡಿ ಉತ್ಸವ ಆಚರಣೆಯ ಸೊಲ್ಲೇ ಇಲ್ಲ. ದಾಸವಾಣಿ ಹಾಗೂ ವಚನವಾಣಿ ಸಂಗೀತ ಉತ್ಸವಗಳನ್ನು ಹಂಪಿ ಮತ್ತು ಕೂಡಲ ಸಂಗಮದಲ್ಲಿ ಆಚರಿಸುವುದನ್ನೇ ಮರೆತಂತಿದೆ. ದೇಹಕ್ಕೆ ಅನ್ನ ಎಷ್ಟು ಮುಖ್ಯವೊ ಮನಸ್ಸಿನ ನೆಮ್ಮದಿಗೆ ಸಾಂಸ್ಕೃತಿಕ ಹಬ್ಬಗಳೂ ಅಷ್ಟೇ ಮುಖ್ಯ. ಬರದ ನೆಪದಲ್ಲಿ ಆಚರಣೆಗಳಿಗೆ ಕುತ್ತು ತರುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT