ಬೇಸಿಗೆಯಲ್ಲಿ ಬಿದ್ದ ಜೋರು ಮಳೆ ಕಾರಣ ದೇಶದ ಅನೇಕ ಕಡೆ ಫಸಲಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ ಆಹಾರ ಧಾನ್ಯಗಳ ಬೆಲೆ ವೇಗವಾಗಿ ನೆಗೆಯುತ್ತಿದೆ. ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿ ಅವರು ಬೆಲೆ ಏರಿಕೆಯನ್ನು ತಡೆಗಟ್ಟುವುದಾಗಿ ಭರವಸೆ ನೀಡಿದ್ದರು. ‘ಒಳ್ಳೆಯ ದಿನ’ ಬರುತ್ತದೆ ಎಂಬ ಕನಸು ಬಿತ್ತಿದ್ದರು. ಆದರೆ ಅಂಥ ದಿನಗಳು ಬರುವ ಸಾಧ್ಯತೆ ಕಾಣಿಸುತ್ತಿಲ್ಲ.
ಆ ಕನಸು ನನಸಾಗಬೇಕಾದರೆ ಬೇಳೆಕಾಳುಗಳ ಬೆಲೆ ಏರಿಕೆ ತಡೆಗಟ್ಟಲು ಬಿಗಿ ಕ್ರಮ ಕೈಗೊಳ್ಳುವುದು ಅನಿ ವಾರ್ಯ. ಧಾನ್ಯದ ಅಕ್ರಮ ಸಂಗ್ರಹ ತಪ್ಪಿಸಬೇಕು. ಅಗತ್ಯವಿದ್ದರೆ ಆಮದು ಮಾಡಲು ತೀರ್ಮಾನ ಕೈಗೊಳ್ಳಬೇಕು. ಬೆಲೆ ಏರಿಕೆಯ ಬಿಸಿ ತಪ್ಪಿಸಿದರೆ ಅದೇ ಮಹಾಭಾಗ್ಯ.