ನಾವು ಗಣಪತಿ ಹಬ್ಬಕ್ಕೆ ನೆಂಟರ ಮನೆಗೆ ಹೋಗಿದ್ದೆವು. ವಿಶೇಷವೆಂದರೆ ನಾವು ನಮ್ಮ ನೆಂಟರ ಜೊತೆ ಮಾತೇ ಆಡಲಿಲ್ಲ. ಏಕೆಂದರೆ ಪರಸ್ಪರ ನಾವು ಮಾತಾಡಿದರೆ ಮಾತು ಯಾರಿಗೂ ಕೇಳುತ್ತಲೇ ಇರಲಿಲ್ಲ. ನೆಂಟರ ಮನೆಯ ರಸ್ತೆಯಲ್ಲಿ ಅಂದು ಗಣೇಶನ ವಿಸರ್ಜನೆ. ನೆಂಟರು ನಮ್ಮನ್ನು ನೋಡಿ ಮುಗುಳ್ನಕ್ಕರು. ಮಾತಾಡಲು ಪ್ರಯತ್ನಿಸಿ ಕೊನೆಗೆ ಅಸಹಾಯಕತೆಯಿಂದ ಕೈ ಚೆಲ್ಲಿದರು. ತಮಟೆ ಸದ್ದು ಕಿವಿತಮಟೆಯನ್ನು ಭೇದಿಸುವಂತೆ ಏಕಪ್ರಕಾರವಾಗಿ ಕೇಳುತ್ತಿತ್ತು. ಕಿಟಕಿ ಮುಚ್ಚಿದರೂ ಪ್ರಯೋಜನವಾಗಲಿಲ್ಲ.
ಹಿಂದಿನ ರಾತ್ರಿಯೂ ಹನ್ನೊಂದರವರೆಗೆ ವಾದ್ಯಗೋಷ್ಠಿ ನಡೆದಿದ್ದರಿಂದ ಮನೆಯಲ್ಲಿರುವ ವಯಸ್ಸಾದ ತಾಯಿಯೂ ನಿದ್ದೆಗೆಡಬೇಕಾ ಯಿತು.
ಇಂಥ ಮಾಲಿನ್ಯ ನಿಯಂತ್ರಿಸಲು ಮತ್ತು ಪರಿಸರ ಕಾಪಾಡಲು ನಮ್ಮಲ್ಲಿ -ಕಾಯ್ದೆಗಳಿಲ್ಲವೇ?