ಗುಜರಾತಿನ ರಾಜ್ಕೋಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರು ಮೋದಿ ಅವರದ್ದೇ ಹೆಸರಿನಲ್ಲಿ ದೇವಾಲಯವೊಂದನ್ನು ನಿರ್ಮಿಸಿದ್ದರು. ಮೋದಿಯವರು ಇದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಅಲ್ಲಿನ ಜಿಲ್ಲಾಡಳಿತ ಈಗ ಮಂದಿರವನ್ನು ತೆರವುಗೊಳಿಸಿದೆ. ಮೋದಿಯವರು ಬಹುಕಾಲ ಮುಖ್ಯಮಂತ್ರಿ ಯಾಗಿದ್ದ ರಾಜ್ಯದಲ್ಲಿ ಅವರಿಗೆ ಒಂದು ದೇವಾಲಯ ಕಟ್ಟಿಸುವ ವರದಿಗಳು ಗುಪ್ತಚರ ದಳದ ಮೂಲಕ ಅವರಿಗೆ ಮೊದಲೇ ಬಂದಿರುತ್ತವೆ.
ಆದರೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರ ಪಕ್ಷ ಹೀನಾಯ ಸೋಲನ್ನು ಉಂಡಮೇಲೆ, ಅವರು ಈ ದೇವಾಲಯ ನಿರ್ಮಿಸಿರುವುದರ ಬಗ್ಗೆ ಅಸಮಾಧಾನ ಹಾಗೂ ಆಘಾತಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಇಂಥದಕ್ಕೆ ಅವಕಾಶ ಇಲ್ಲವೆಂದೂ ಹೇಳಿದ್ದಾರೆ. ಅವರಿಗೆ ಈ ಕುರಿತು ತಡವಾಗಿಯಾದರೂ ಜ್ಞಾನೋದಯವಾಗಿರುವುದು ಸಮಾಧಾನದ ವಿಷಯ. ಇಲ್ಲಿವರೆಗೆ ‘ಕಣ್ಣು’, ‘ಕಿವಿ’ ಗಳನ್ನು ಮುಚ್ಚಿಕೊಂಡಿದ್ದ ರಾಜ್ಕೋಟ್ ಜಿಲ್ಲಾಡಳಿತವು ಬಹುಶಃ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಈಗ ಏನೋ ಸಬೂಬು ಹೇಳಿ, ಮೋದಿಯವರ ದೇವಾಲಯವನ್ನು ತೆಗೆಸಿದೆ. ಪ್ರಧಾನಿಯಾದವರಿಗೆ ಇಂಥ ‘ವಿಳಂಬ ಜ್ಞಾನೋದಯ’ ತರವಲ್ಲ.