ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಾತನಾಡುತ್ತ. ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಋಣ ತೀರಿಸಲು ಕೊನೆಯ ಹೋರಾಟ ಮಾಡುತ್ತೇನೆ ಎಂದು ಬಹಳ ಸಂತೋಷದಿಂದ, ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇಡೀ ದೇಶದ ಸಮಸ್ತ ಪಕ್ಷಗಳ ಶಾಸಕ, ಮಂತ್ರಿ, ಪ್ರಧಾನಿ, ರಾಷ್ಟ್ರಪತಿಗಳಾದಿ ಎಲ್ಲಾ ರಾಜಕೀಯ ನಾಯಕರೆಲ್ಲರೂ ಪ್ರಜೆಗಳು ಕಟ್ಟುವ ತೆರಿಗೆಯ ಹಣದ ಋಣದಲ್ಲಿದ್ದಾರೆ. ಕೃಷ್ಣಅವರು ಹೇಳುವ ಶ್ರೀಮತಿ ಸೋನಿಯಾ ಗಾಂಧಿಯವರೂ ಪ್ರಜೆಗಳ ಋಣದಲ್ಲಿಯೇ ಇದ್ದಾರೆ. ಅಂದಮೇಲೆ ಇವರು ಅವರ ಋಣಿಗಳು ಹೇಗೆ ಆಗುತ್ತಾರೆ? ನ್ಯಾಯವಾಗಿ ಕೃಷ್ಣ ಅವರು ಕನ್ನಡ ನೆಲದ, ಕನ್ನಡಿಗರ ಋಣದಲ್ಲಿದ್ದಾರೆ. ಮೊದಲು ಅವರ ಋಣ ತೀರಿಸಲಿ.