ಹಾಗಾದರೆ, ಈ ‘ಆಧಾರ್’ ಯಾವುದಕ್ಕೆ ಬೇಕಾಗಿದೆ? ಸಾಮಾನ್ಯ ಜನರು ಬ್ಯಾಂಕ್ನಲ್ಲಿ ಸಣ್ಣ ಉಳಿತಾಯ ಖಾತೆ ತೆರೆಯಲು ಆಧಾರ್ ಬೇಕು, ಅಡುಗೆ ಅನಿಲ ಸಂಪರ್ಕ ಪಡೆಯಲು ಆಧಾರ್ ಬೇಕು, ಮೊಬೈಲ್ ಫೋನ್ಗೆ ಆಧಾರ್ ಬೇಕು... ಹೀಗೆ ಶ್ರೀಸಾಮಾನ್ಯನ ಎಲ್ಲ ಜುಜುಬಿ ಕೆಲಸಗಳಿಗೂ ಆಧಾರ್ ಬೇಕು. ಆದರೆ, ಧನವಂತರ ಆಸ್ತಿ ವ್ಯವಹಾರಗಳಿಗೆ ಬೇಕಾಗಿಲ್ಲ, ಜನಗಣತಿ ಸಂದರ್ಭದಲ್ಲಿ ಆಧಾರ್ ಬೇಕಾಗಿಲ್ಲ. ಮತದಾನಕ್ಕೆ ಆಧಾರ್ ಕಡ್ಡಾಯವಲ್ಲ. ಮೇಲಾಗಿ, ನೆರೆ ರಾಷ್ಟ್ರಗಳಿಂದ ಕಳ್ಳ ಹಾದಿಯಲ್ಲಿ ನಮ್ಮ ದೇಶದೊಳಗೆ ನುಸುಳುವ ಸಾವಿರಾರು ಜನರಿಗೆ ಆಧಾರ್ ಬಹಳ ಸುಲಭವಾಗಿ ಲಭಿಸುತ್ತದೆ.