ವಿದ್ಯುತ್ ಇಲ್ಲದೆ ಪರಿತಪಿಸುವ ಗ್ರಾಮೀಣ ಪ್ರದೇಶಗಳು ಒಂದೆಡೆಯಾದರೆ, ವಿದ್ಯುತ್ ಅಪಾರವಾಗಿ ಪೋಲು ಮಾಡುವ ನಗರ ಂಗಳೂರು. ಇದಕ್ಕೆ ತಾಜಾ ಉದಾಹರಣೆ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 8ರ ಕೊಡುಗೆಹಳ್ಳಿ ಭದ್ರಪ್ಪ ಬಡಾವಣೆ.
ಇಲ್ಲಿನ ಗಣೇಶ ದೇವಾಲಯದಿಂದ ಭದ್ರಪ್ಪ ಬಡಾವಣೆಗೆ ಬರುವ ರಸ್ತೆಯಲ್ಲಿ ಹೈಮಾಸ್ಟ್ ದೀಪದಿಂದ ಕೇವಲ 8 ಅಡಿ ದೂರದಲ್ಲಿ ಮತ್ತೊಂದು ಕಂಬದಲ್ಲಿ ಸೋಡಿಯಂ ದೀಪ ಬೆಳಗುತ್ತಿರುತ್ತದೆ.
ಇದರ ಪಕ್ಕದಲ್ಲೇ ಇರುವ ಕಂಬದಲ್ಲಿಯೂ ತಲಾ ಒಂದೊಂದು ದೀಪ ಬೆಳಗುತ್ತ ವಿದ್ಯುತ್ ಪೋಲಾಗುತ್ತಿದೆ. ಇನ್ನಾದರೂ ಬೆಸ್ಕಾಂ ಅಧಿಕಾರಿಗಳು ಅಗತ್ಯಕ್ಕಿಂತ ಹೆಚ್ಚಾಗಿರುವ ಬೀದಿ ದೀಪಗಳನ್ನು ತೆರವು ಮಾಡಿ ಕತ್ತಲೆಯ ಪ್ರದೇಶಗಳಿಗೆ ವರ್ಗಾಯಿಸಿಯಾರೇ?