ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವೀಕರಣ ಬೇಡ

Last Updated 7 ಜನವರಿ 2016, 19:30 IST
ಅಕ್ಷರ ಗಾತ್ರ

ಇಂದಿರಾ ಗಾಂಧಿ ಹಂತಕರನ್ನು ‘ಹುತಾತ್ಮರು’ ಎಂದು ವೈಭವೀಕರಿಸಿ, ಅವರ ಕುಟುಂಬದವರನ್ನು ಸನ್ಮಾನಿಸಿರುವ ವಿಷಯ ತಿಳಿದು ನೋವಾಯಿತು. ಸಿಖ್‌ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ, ಗುರುದ್ವಾರವೊಂದರಲ್ಲಿ ಅಕಾಲಿದಳದ ಹಿರಿಯರ ಸಮ್ಮುಖದಲ್ಲಿ ಈ ಸನ್ಮಾನ ನಡೆದಿರುವುದು ವಿಷಾದದ ಸಂಗತಿ.

ಹಿಂಸೆಯ, ಕೊಲೆಯ ವೈಭವೀಕರಣ ಸಲ್ಲದು. ಹಿಂಸೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಯಾವುದೇ ಧರ್ಮಕ್ಕಿಂತ ‘ರಾಷ್ಟ್ರಧರ್ಮ’ ಸಂವಿಧಾನ ದೊಡ್ಡದು. ಯುವಕರು ಧರ್ಮವನ್ನು ಅನುಸರಿಸುತ್ತಲೇ ಸಹಿಷ್ಣುಗಳಾಗಬೇಕಾದುದು ಇಂದಿನ ತುರ್ತು ಅಗತ್ಯ. ಇಂತಹ ‘ಸನ್ಮಾನ’ಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT