ಕಳೆದ ದಶಕದಲ್ಲಿ ವಿಶ್ವದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಅಂತೆಯೇ ಭಾರತ ಕ್ರಿಕೆಟ್ನಲ್ಲೂ ಅಧ್ಯಕ್ಷರಿಂದ ಆಯ್ಕೆದಾರರವರೆಗೂ, ನಾಯಕನಿಂದ ಕೊನೆಯ ಆಟಗಾರನವರೆಗೂ ಬದಲಾವಣೆ ನೋಡಿದ್ದೇವೆ. ಆದರೆ ಒಂದು ‘ಗುಂಪು’ ಮಾತ್ರ ಹಾಗೇ ಇದೆ.
ಅದು, ವೀಕ್ಷಕ ವಿವರಣೆ ನೀಡುವ ಸುನಿಲ್ ಗಾವಸ್ಕರ್, ಹರ್ಷ ಭೋಗ್ಲೆ, ರವಿ ಶಾಸ್ತ್ರಿ ಮತ್ತು ಸಂಜಯ್ ಮಾಂಜ್ರೇಕರ್ ‘ಗುಂಪು.’ ಶತಕೋಟಿ ಮೀರಿ ಜನಸಂಖ್ಯೆ ಹೊಂದಿರುವ, ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿರುವ ಈ ರಾಷ್ಟ್ರದಲ್ಲಿ, ವೀಕ್ಷಕ ವಿವರಣೆ ನೀಡುವ ಸಾಮರ್ಥ್ಯ ಇರುವ ಬೇರೆಯವರು ಇಲ್ಲವೇ? ಕೆಲ ಹೊಸ ಮುಖಗಳು ಕಾಣಿಸುತ್ತಿವೆಯಾದರೂ ಅದು ಸಾಲದು. ಹೊಸಬರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ.