ವಿಧಾನ ಪರಿಷತ್ ಸದಸ್ಯರೊಬ್ಬರು ಶೃಂಗಾರಭರಿತ ಲಲನೆಯರ ಫೋಟೊಗಳನ್ನು ವಾಟ್ಸ್ ಆ್ಯಪ್ ಗ್ರೂಪ್ಗೆ ದಾಟಿಸಿದ್ದು ಈಗ ವಿವಾದಕ್ಕೆ ಎಡೆ ಮಾಡಿದೆ.
ಶೃಂಗಾರದ ಶಕ್ತಿಯೇ ಅಂತಹುದು. ಮೇನಕೆಯ ಶೃಂಗಾರಕ್ಕೆ ವಿಶ್ವಾಮಿತ್ರ ಮಹರ್ಷಿಯೇ ಮನಸೋತಿರುವಾಗ, ಪಾಪ ಶಾಸಕರೇನು ಮಾಡಿಯಾರು? ಅವರೊಬ್ಬರೇ ಆಸ್ವಾದಿಸಿದ್ದರೆ ಚೆನ್ನಿತ್ತು. ಸ್ವಾರ್ಥಿಯಾಗದೆ ಧಾರಾಳಿಯಾಗಿದ್ದುದು ಸಮಸ್ಯೆ ತಂದಿದೆ.