ಟಿ.ಆರ್.ಪಿ.ಯ ಮೋಹದಿಂದ ನಮ್ಮ ಸೀರಿಯಲ್ ನಿರ್ದೇಶಕರುಗಳು ಭೂತ–ಪ್ರೇತ, ದೆವ್ವ– ದೇವರು, ಮಾಟ–ಮಂತ್ರ, ಜ್ಯೋತಿಷಿಗಳ ಮೊರೆ ಹೋಗಿರುವುದು ವಿಷಾದದ ಸಂಗತಿ. ಕನ್ನಡ ಭಾಷೆಯಲ್ಲಿ ಒಳ್ಳೆಯ ಕಥೆ, ಕಾದಂಬರಿಗಳಿಲ್ಲವೇ? ಸಿನಿಮಾಗೆ ಇರುವಂತೆ ಸೀರಿಯಲ್ಗಳಿಗೂ ಸೆನ್ಸಾರ್ ಮಂಡಳಿಯ ಅವಶ್ಯಕತೆ ಖಂಡಿತಾ ಇದೆ. ಸರ್ಕಾರ ಮೌಢ್ಯ ನಿಷೇಧ ಮಸೂದೆ ಅಂಗೀಕಾರ ಮಾಡಿರುವಾಗ ಈ ತರಹದ ಧಾರಾವಾಹಿಗಳಿಗೆ ಕಡಿವಾಣ ಅತ್ಯಗತ್ಯ. ನಿರ್ಮಾಪಕ–ನಿರ್ದೇಶಕರು ಈ ನಿಟ್ಟಿನಲ್ಲಿ ಯೋಚಿಸಬೇಕು.