‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬ ಶ್ರೇಷ್ಠ ಉಕ್ತಿಗೆ ಇನ್ನೂ ಹೆಚ್ಚಿನ ಗೌರವ ಸಿಕ್ಕಿದೆ. ಕಾರಣ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಏಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇದರ ಜೊತೆಗೇ, ಮಹಾರಾಷ್ಟ್ರದ ಅಹಮದ್ ನಗರ ಸಮೀಪವಿರುವ ಶನಿದೇಗುಲಕ್ಕೆ ನಿರ್ಬಂಧ ಸಡಿಲಿಸಿ ಅಲ್ಲಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿದ್ದು ಮಹಿಳೆಯರಿಗೆ ಸಿಕ್ಕ ಗೌರವ ಅಲ್ಲವೇ?