ಗೋಮಾಂಸ ಸೇವನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ತಮ್ಮ ಪಕ್ಷದ ಮುಖಂಡರಿಗೆ ತಾಕೀತು ಮಾಡಿರುವುದು ಹಾಗೂ ದಾದ್ರಿ ಘಟನೆ ಕುರಿತಾದ ಆರ್ಎಸ್ಎಸ್ ಮುಖವಾಣಿ ‘ಪಾಂಚಜನ್ಯ’ದ ಸಮರ್ಥನೆಯ ಸುದ್ದಿ (ಪ್ರ.ವಾ., ಅ. 19) ಓದಿ ನಗು ಬಂತು. ಹಾವಿಗೆ ಎರಡು ನಾಲಿಗೆಗಳಿರುತ್ತವೆ. ಆದರೆ, ಸಂಘ ಪರಿವಾರದವರಿಗೆ ಹಲವು ನಾಲಿಗೆಗಳು!
ಒಂದಂತೂ ಸತ್ಯ. ಕ್ರೌರ್ಯವನ್ನು ಎತ್ತಿಹಿಡಿಯುವ ಕೆಲವು ಹಿಂದುತ್ವವಾದಿಗಳನ್ನು ಪ್ರಜ್ಞಾವಂತ ಹಿಂದೂ ಧರ್ಮೀಯರ್ಯಾರೂ ಎಂದೂ ಬೆಂಬಲಿಸುವುದಿಲ್ಲ. ಕ್ರೌರ್ಯವನ್ನು ಮಾನವ ಚರಿತ್ರೆಯು ಯಾವತ್ತೂ ನಕಾರಾತ್ಮಕವಾಗಿಯೇ ನೋಡಿದೆ. ಅಮಾಯಕರ ಮೇಲಿನ ದಾಳಿ ಮತ್ತು ಹತ್ಯೆಗಳಲ್ಲಿ ನ್ಯಾಯಬದ್ಧತೆ ಮತ್ತು ಶೂರತ್ವ ಗುರುತಿಸುವುದು, ವೇದಾಗಮಗಳ ಸಮರ್ಥನೆ ಒದಗಿಸುವುದು ರಾಕ್ಷಸತನವೇ ವಿನಾ ಬೇರೇನೂ ಅಲ್ಲ.