ಅವರ ಚಿಂತನೆ ರಾಮಮನೋಹರ ಲೋಹಿಯಾ ಅವರಿಂದ ಬಂದಿದೆ. ಆದರೆ, ಮದ್ಯಪಾನ ಎಷ್ಟು ಅಪಾಯ ಎಂಬುದನ್ನು ಲೋಹಿಯಾ ಅವರು ಗಾಂಧೀಜಿ ಅವರಂತೆ ಬೋಧಿಸುವುದಿಲ್ಲ’ ಎನ್ನುತ್ತಾರೆ. ಇಲ್ಲೊಂದು ಪ್ರಶ್ನೆ ಧುತ್ತೆಂದು ಏಳುತ್ತದೆ. ಮದ್ಯ ನಿಷೇಧ ಸಂಸ್ಕೃತೀಕರಣದ ಭಾಗ ಎಂದಾಗುವುದಾದರೆ, ಗಾಂಧಿ ಅವರೂ ‘ಸಂಸ್ಕೃತೀಕರಣ’ದ ಅಥವಾ ‘ಬ್ರಾಹ್ಮಣ್ಯ’ದ ಪೋಷಕರಾಗಿದ್ದರೇ?
ಲೇಖಕರು ಮುಂದುವರಿಯುತ್ತಾ, ‘ಮದ್ಯದ ಮೇಲೆ ನಿಷೇಧ ಇಲ್ಲದ ಐರೋಪ್ಯ ರಾಷ್ಟ್ರಗಳನ್ನೂ, ನಿಷೇಧವಿರುವ ಅರಬ್ ಜಗತ್ತಿನ ಹಲವು ದೇಶಗಳನ್ನೂ ತಾಳೆ ಹಾಕಿ ನೋಡಿದಾಗ, ಯಾವ ಸಮಾಜ ಹೆಚ್ಚು ಉತ್ತಮವಾಗಿದೆ, ಹೆಚ್ಚು ನೈತಿಕವಾಗಿದೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ.