ಬಂಡಾಯ ಪಂಥದ ಆಶಯವನ್ನು ಒಪ್ಪಿಯೂ ಅದರ ವಾಚ್ಯಗುಣವನ್ನು ಅಮಾನತ್ತಿನಲ್ಲಿರಿಸುವ, ನವ್ಯದ ಕಸುಬುಗಾರಿಕೆಯನ್ನು ಅನುಸರಿಸಿಯೂ ಅದರ ವ್ಯಕ್ತಿಗತ ಸಾಹಿತ್ಯಕ ನಿಲುವನ್ನು ನಿರಾಕರಿಸುವ ನಮ್ಮಂತಹ ಹೊಸಕಾಲದ ಬರಹಗಾರರ ತಾತ್ವಿಕತೆ ಈ ನೆವದಲ್ಲಾದರೂ ಪ್ರಕಟಗೊಳ್ಳಬೇಕಿದೆ.
ಚಂಪಾರಂತಹ ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಬರುತ್ತೇನೆನ್ನುವುದು, ಕೆ.ವಿ.ತಿರುಮಲೇಶ ರಂತವರು ಸಾರಾಸಗಟಾಗಿ ತಿರಸ್ಕರಿಸಿರುವುದರ ಭಯಂಕರ ವೈರುಧ್ಯದ ಸಂಕೀರ್ಣತೆ ಅರ್ಥಮಾಡಿಕೊಳ್ಳಬೇಕು. ನನಗೆ ಒಟ್ಟಾರೆ ಅನ್ನಿಸುವುದು ವರ್ತಮಾನದ ಕನ್ನಡ ಸಾಹಿತ್ಯದ ಧೋರಣೆಗಳು ಬದಲಾಗುತ್ತಿವೆ. ಹೊಸ ಗಾಳಿ ಬೀಸುತ್ತಿದೆ. ನಾವು ಸರಿಯಾಗಿ ಗಮನಿಸುತ್ತಿಲ್ಲ.