ರಿಯಾಯಿತಿ ದರದಲ್ಲಿ 5 ಕೆಜಿ ತೂಕವಿರುವ ಉದ್ದು ₹660, ಸೂರ್ಯಕಾಂತಿ ₹1720, ಅಲಸಂದೆ ₹530, ಹೆಸರು ₹805 ರಂತೆ ದೊರಕುತ್ತಿದೆ. ರೈತರು ಆರ್ ಟಿಸಿ ಹಾಗೂ ಆಧಾರ್ ಕಾರ್ಡ್ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಜಾತಿ ಪ್ರಮಾಣ ಪತ್ರ, ಆರ್ ಟಿಸಿ ಹಾಗೂ ಆಧಾರ್ ಕಾರ್ಡ್ ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದು ಎಂದು ಕೃಷಿ ಅಧಿಕಾರಿಗಳು ಹೇಳಿದರು.