ಒಮ್ಮೆ ವೈದ್ಯರೊಬ್ಬರಿಗೆ ನಾನು ಕೊಟ್ಟ ಪತ್ರದ ಮೇಲೆ ವರ್ಗಾವಣೆ ಆಯಿತು. ಆಗ ಅವರು ಚುನಾವಣೆ ಖರ್ಚಿಗೆಂದು ಹಣ ಕೊಡಲು ಬಂದರು. ಇದನ್ನು ನೋಡಿದ ನನ್ನ ತಂದೆ, ಒಳಗೆ ಕರೆದು ಎಂತಹದ್ದೇ ಅನಿವಾರ್ಯ ಇದ್ದರೂ ವೈದ್ಯರಿಂದ ಹಣ ತೆಗೆದುಕೊಳ್ಳಬೇಡ ಎಂದು ಕಟ್ಟಪ್ಪಣೆ ಮಾಡಿದ್ದರು. ವೈದ್ಯರದ್ದು ಬಡವರ ಔಷಧಿ ಹಣ ಅಂದ್ರು. ಲಂಚ ಯಾರಿಂದಲೂ ಪಡೆಯಬೇಡ ಅಂದರು. ಇಂತಹ ಸಾಕಷ್ಟು ಸನ್ನಿವೇಶಗಳಲ್ಲಿ ನನ್ನ ತಂದೆ ನನಗೆ ಮಾರ್ಗದರ್ಶನ ಮಾಡಿದ್ದಾರೆ.