ಮಾಗಡಿ ಹತ್ತಿರದ ದೊಡ್ಡಮುದಗೆರೆ ನನ್ನ ಊರು. ಅಪ್ಪ ರಂಗಯ್ಯ ವೃತ್ತಿಯಿಂದ ಶಾನುಭೋಗರು. ಅಮ್ಮ ಪುಟ್ಟಲಕ್ಷ್ಮಮ್ಮ. ನಾವು ಒಟ್ಟು 9 ಜನ ಮಕ್ಕಳು. ನಾನೇ ಕೊನೆಯವನು. ನಾನು ಮೂರು ವರ್ಷದವನಿರುವಾಗ ಅಮ್ಮ ತೀರಿಕೊಂಡರು. ಅಮ್ಮನ ಸಾವಿನಿಂದ ಅಪ್ಪ ಜೀವನದಲ್ಲಿ ಆಸಕ್ತಿ ಕಳೆದುಕೊಂಡರು. ಬಾಲ್ಯದಲ್ಲೇ ನನ್ನ ಬದುಕು ಅಲೆಮಾರಿಯಂತಾಯಿತು. ಮಾಗಡಿಯಲ್ಲಿ ಮಿಡ್ಲಸ್ಕೂಲ್, ಹೈಸ್ಕೂಲ್ ಓದಿದೆ. 19ನೇ ವರ್ಷಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾದೆ. ಕನಕಪುರ, ರಾಮನಗರ, ಹೊಸಕೋಟೆ ಶಾಲೆಗಳಲ್ಲಿ ಪಾಠ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.