ಜೈಕಾರದ ಝೇಂಕಾರವು ಹತ್ತು ಲೋಕಗಳಿಗೆ ಹಬ್ಬಿ
ಕನ್ನಡ ಭುವನೇಶ್ವರಿಯನು ಹೊತ್ತು ಮೆರೆಸಿ ಹರುಷಗೊಂಡ
ಕುಣಿದು ಮಣಿದು ದಣಿಯದಂತೆ ಗೆಲುವಿನಿಂದ ತಲೆಯನೆತ್ತಿ
ಮುನ್ನಡೆಯುವ ರಣಧೀರರ ಪಡೆಯು ಯಾವುದು?
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯು ಹರಸಲೆಂದು
ಪುಂಡಲೀಕ ಹಾಲಂಬಿಯ ನುಡಿಸೇವೆಯ ನೋಡಲೆಂದು
ಬಾಲಕೃಷ್ಣರಭಿಮಾನದ ಕೈಂಕರ್ಯವ ಕಾಣಲೆಂದು
ನದಿಗಳಂತೆ ಹರಿದು ಬಂದ ಜನವು ಯಾವುದು?