ಅವರು
ನಮ್ಮನ್ನು ಜೀವಸಹಿತ
ಹೂತುಬಿಟ್ಟರು
ಗೊತ್ತಿರಲಿಲ್ಲ ಅವರಿಗೆ ನಾವು
ತೇವಕಾಯ್ದು
ಮೊಳಕೆಯೊಡೆಯುವ ರಾಗಿ
ಕಾಳುಗಳೆಂದು
ಅವರು
ನಮ್ಮನ್ನು ಮಡಿ ಬಟ್ಟೆಯೊಳಗೆ
ಕೂಡಿ ಗಂಟಿಕ್ಕಿದರು
ಗೊತ್ತಿರಲಿಲ್ಲ ಅವರಿಗೆ ನಾವು
ಸುಡುವ ಕೆಂಡಗಳೆಂದು
ಅವರು
ನಮ್ಮನ್ನು ಸುಡು ಮರಳುಗಾಡಿಗೆ
ದೂಡಿದರು
ಗೊತ್ತಿರಲಿಲ್ಲ ಅವರಿಗೆ ನಾವು
ಇಬ್ಬನಿ ಕುಡಿದು ಹೂ ಅರಳಿಸುವ
ಖರ್ಜೂರ ಪಾಪಾಸು ಕಳ್ಳಿಗಳೆಂದು
ಅವರು
ನಮ್ಮ ಕನಸ ರೆಕ್ಕೆಮುರಿದು
ಜೀವಂತ ಸುಟ್ಟರು
ಗೊತ್ತಿರಲಿಲ್ಲ ಅವರಿಗೆ ನಾವು
ಮುಂಗಾರಿಗೆ ಮತ್ತೆ ತಲೆಎತ್ತಿ
ಹಬ್ಬುವ ಗರಿಕೆ ಎಂದು