ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅನಾಹುತ: ಮರ ಮುಟ್ಟುಗಳು ಭಸ್ಮ

Last Updated 26 ಫೆಬ್ರುವರಿ 2015, 9:48 IST
ಅಕ್ಷರ ಗಾತ್ರ

ರಾಮನಗರ: ನಗರದ ಮಾಗಡಿ ರಸ್ತೆಯ ಕೆಂಪೇಗೌಡ ವೃತ್ತದ ಬಳಿ­ಯಲ್ಲಿರುವ ರೆಡ್ಡಿ ಸಾ ಮಿಲ್‌ನಲ್ಲಿ ಆಕ­ಸ್ಮಿಕವಾಗಿ ಉಂಟಾದ ಬೆಂಕಿಗೆ ಲಕ್ಷಾಂ­ತರ ಮೌಲ್ಯದ ಮರ ಮುಟ್ಟುಗಳು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಮಿಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡ, ಕೆಲವೇ ನಿಮಿಷದಲ್ಲಿ ಅಲ್ಲಿದ್ದ ಮರದ ರಾಶಿಗೆ ಬೆಂಕಿ ಹರಡಿದೆ. ತಕ್ಷಣ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿ­ತಾದರೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಅವಘಡ ತೀವ್ರ ಸ್ವರೂಪ ತಾಳಿತ್ತು.

ಅಗ್ನಿ ಶಾಮಕ ದಳದ ವಾಹನ ತನ್ನ­ಲ್ಲಿದ್ದ ನೀರನ್ನು ಸಂಪೂರ್ಣ ಖಾಲಿ ಮಾಡಿ ಬೆಂಕಿಯನ್ನು ನಂದಿಸಿತು. ಆದರೆ ಪುನಃ ಮರ ಮಟ್ಟುಗಳಿಗೆ ಬೆಂಕಿ ಹತ್ತಿ­ಕೊಂ­ಡಿತು.   ವಾಹನದಲ್ಲಿ ನೀರು ಇರಲಿ­ಲ್ಲದ ಕಾರಣ ಹೆಚ್ಚಿನ ಅನಾ­ಹುತ ಸಂಭ­ವಿ­ಸಿತು. ಆಗ ಮತ್ತೊಂದು ಅಗ್ನಿ ಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿತು. ನಗರದ ಮದ್ಯಭಾಗದಲ್ಲಿ ಬೆಂಕಿಯ ಹೊಗೆ ದಟ್ಟವಾಗಿ ಹಬ್ಬಿದ್ದರಿಂದ ಅಲ್ಪ ಕಾಲ ಸುತ್ತಮುತ್ತಲ ನಾಗರಿಕರು ಆತಂ­ಕಕ್ಕೆ ಒಳಗಾಗಿದ್ದರು. ಅಲ್ಲದೆ ಸಾ ಮಿಲ್ ಪಕ್ಕದಲ್ಲಿಯೇ ಶಾಲೆ ಇದ್ದ ಕಾರಣ ಶಾಲೆಯ ಸಿಬ್ಬಂದಿ ಸಹ ಆತಂಕಕ್ಕೆ ಒಳಗಾ­ಗಿದ್ದರು. ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಗ್ನಿ ಅನಾ­ಹುತಕ್ಕೆ ಕಾರಣ ಏನೆಂಬುದಕ್ಕೆ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT