ಕಲಬುರ್ಗಿ: ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರೊ.ಆರ್.ಕೆ.ಹುಡಗಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ಕಲಾವಿದರು ರಂಗಾಯಣ ಕಚೇರಿ ಮುಂದೆ ಮಂಗಳವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
‘ನಮ್ಮ ಹೋರಾಟ ಈಗಾಗಲೇ 90ದಿನ ಪೂರೈಸಿದೆ. ಆದರೆ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಈಗಲಾದರೂ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಉಪವಾಸನಿರತ ಕಲಾವಿದರಾದ ಲಕ್ಷ್ಮಣ ಮಂಡಲಗೇರ, ತುಳಜಾರಾಮ್ ಸಿಂಗ್, ಮಹೇಶ ಭರಮರೆಡ್ಡಿ, ವಿಜಯಲಕ್ಷ್ಮಿ ದೊಡ್ಡಮನಿ ಆಗ್ರಹಿಸಿದ್ದಾರೆ.
ಕಲಾವಿದರಾದ ರವಿಕುಮಾರ ಬಿಸರಳ್ಳಿ, ಪರಶುರಾಮ ಸಿ.ಎಂ., ಗ್ರಾಹಿಕಾ ಸೋನಾರೆ, ಭೀಮಬಾಯಿ ಎಸ್.ಕೆ. ಹಾಗೂ ಈರಮ್ಮ ಹೋರಾಟಕ್ಕೆ ಬೆಂಬಲವಾಗಿದ್ದಾರೆ.