ಈ ಮೊದಲು, ಜೂನ್ 5ರ ಆಸುಪಾಸು ಕೇರಳ ಕರಾವಳಿಗೆ ನೈರುತ್ಯ ಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಪೂರ್ವ ಭಾರತದಲ್ಲಿ ತಾಪಮಾನ ಹೆಚ್ಚಿದ್ದು, ಮೊದಲ ಮಳೆ ಈ ಪ್ರದೇಶದಲ್ಲಿ ಹಿತವಾದ ವಾತಾವರಣ ತರಲಿದೆ. ಆದರೆ, ಇದು ಈ ವರ್ಷ ಸಾಕಷ್ಟು ಮಳೆ ಸುರಿಯುವ ಸೂಚನೆ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.