ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದರ ಬಗ್ಗೆ ಆ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಷಾದ ವ್ಯಕ್ತಪಡಿಸಿರುವುದು ಬರೀ ಬೂಟಾಟಿಕೆ ಅನ್ನಿಸುತ್ತದೆ. ಮುಖ್ಯಮಂತ್ರಿಗೆ ಮಾಹಿತಿ ಇಲ್ಲದೆಯೇ ನಿರ್ಬಂಧ ಸಾಧ್ಯವಿಲ್ಲ.
ಈ ವಿದ್ಯಮಾನ, ಸರ್ವಾಧಿಕಾರ ಆಡಳಿತವಿರುವ ದೇಶಗಳ ನಿರಂಕುಶ ನಡೆಯನ್ನು ನೆನಪಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಿದ್ದು ಅಸಾಂವಿಧಾನಿಕ ನಡೆ. ಕಾಶ್ಮೀರದ ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಕ್ಕೇ ಕೊಡಲಿ ಪೆಟ್ಟು ಕೊಟ್ಟಂತಿದೆ.
ಕಾಶ್ಮೀರದಲ್ಲಿ ಅಂತರ್ಜಾಲದ ಮೇಲಿನ ನಿಷೇಧ ಇನ್ನೂ ಮುಂದುವರಿದಿರುವುದು ಕಳವಳದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ಧ ಪತ್ರಕರ್ತರು, ಬುದ್ಧಿಜೀವಿಗಳು, ಚಿಂತಕರು ಧ್ವನಿ ಎತ್ತುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ.