ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮುಕರಿಗೆ ಆಗಲೇಬೇಕು ಶಿಕ್ಷೆ

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ವಸತಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ­ಯರಿಗೆ ಅಡುಗೆ ಸಹಾಯಕ 4 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿರುವ ವಿಷಯ ಈಗ ಬಯಲಿಗೆ ಬಂದಿರುವುದು ಆಶ್ಚರ್ಯ.

ಪೋಷಕ­ರಿ­ಗಂತೂ ಇಂತಹ ವಿಷಯಗಳು ಗಾಬರಿ ಉಂಟು ಮಾಡಿ ತಮ್ಮ ಮಕ್ಕಳನ್ನು ದೂರದ ಪಟ್ಟಣಗಳಿಗೆ ಓದಿಸಲು ಕಳುಹಿಸದೆ ಮನೆಯಲ್ಲೇ  ಕೂರುವಂತೆ ಮಾಡಿಬಿಡುತ್ತವೆ. ತಂದೆ-ತಾಯಿ, ಬಳಗವನ್ನೆಲ್ಲಾ ತೊರೆದು ವಿದ್ಯಾ­ಭ್ಯಾಸ ಪಡೆಯಲು ಬರುವ ಇಂತಹ ಮಕ್ಕಳನ್ನು ಪೋಷಿಸುವುದನ್ನು ಬಿಟ್ಟು ಕೀಚಕನ ರೂಪ ತಾಳಿದ್ದಂತೂ ದುರಂತ. ಅಷ್ಟೇ ಅಲ್ಲದೆ, ಮಕ್ಕಳ ರಕ್ಷಣೆಗೆ ನಿಲ್ಲಬೇಕಾದ ಸಿಬ್ಬಂದಿಯೇ ಈತನಿಗೆ ಕುಮ್ಮಕ್ಕು ನೀಡಿದ್ದಾರಂತೆ. ಇಂತಹ ಕೆಟ್ಟ ಬುದ್ಧಿ ಅವರಿಗೆ ಹೇಗೆ ಬಂತೊ!?

ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು. ಧೈರ್ಯ ಮಾಡಿ ದೂರು ನೀಡಿರುವುದನ್ನು ಮೆಚ್ಚಲೇಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT