ಕನಕಪುರ ರಸ್ತೆಯಲ್ಲಿರುವ ಜರಗನಹಳ್ಳಿ, ಯಲಚೇನಹಳ್ಳಿ, ಉಪ್ಪಿನಕಾಯಿ ಫ್ಯಾಕ್ಟರಿ, ಕೋಣನಕುಂಟೆ ಈ ಸ್ಥಳಗಳಲ್ಲಿ ಬಸ್ ತಂಗುದಾಣಗಳು ಇಲ್ಲ. ಈ ಕಾರಣದಿಂದಾಗಿ ಪ್ರಯಾಣಿಕರು ಮಳೆ ಹಾಗೂ ಬಿಸಿಲಿಗೆ ಸಿಕ್ಕಿ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಮೇಲೆ ತಿಳಿಸಿರುವ ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಿಸುವುದರ ಜೊತೆಗೆ ಅಲ್ಲಿ ಬಸ್ಸುಗಳ ವೇಳಾಪಟ್ಟಿ ಫಲಕ ಹಾಕಿದರೆ ಪ್ರಯಾಣಿಕರಿಗೆ ತುಂಬ ಅನುಕೂಲವಾಗುತ್ತದೆ.