<p>ಕಳೆದ ತಿಂಗಳು ನಾನು ಪ್ಯಾರಿಸ್ನಲ್ಲಿ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದೆ (ಮೇ ೨೨). ಬ್ಯಾಂಕಾಕ್ನ ಸಹೋದ್ಯೋಗಿಯಿಂದ ನನಗೆ ಮೊಬೈಲ್ ಕರೆ ಬಂತು, ಉತ್ತರಿಸಲಾಗಲಿಲ್ಲ. ಇನ್ನೆರಡು ನಿಮಿಷಕ್ಕೆ ಸಂದೇಶ ಬಂತು: ‘ಥಾಯ್ಲೆಂಡ್ನಲ್ಲಿ ತುರ್ತುಪರಿಸ್ಥಿತಿ ಹೇರಿದ್ದಾರೆ. ನಿನ್ನ ಹೆಂಡತಿ ಹಾಗೂ ಮಗಳಿಗೆ ತೀರಾ ಅಗತ್ಯದ ಹೊರತಾಗಿ ವಸತಿ ಸಮುಚ್ಚಯದಿಂದ ಹೊರಹೋಗದಂತೆ ತಿಳಿಸು. ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸಲು ಹೇಳು. ನಿನಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತೇವೆ’ ಅಂತ.<br /> <br /> ಭಾರತದ ತುರ್ತುಪರಿಸ್ಥಿತಿಯ ಕಥೆಗಳನ್ನು ಕೇಳಿ ತಿಳಿದಿದ್ದ ನನಗೆ ಆತಂಕವಾಯಿತು. ಅಷ್ಟರಲ್ಲಿ ಮನೆಯಿಂದ ಬಂದ ‘ನಾವು ಸುರಕ್ಷಿತವಾಗಿದ್ದೇವೆ, ಚಿಂತಿಸಬೇಕಾಗಿಲ್ಲ’ ಎಂಬ ಸಂದೇಶ ಮನಸ್ಸಿಗೆ ಸಮಾಧಾನ ತಂದಿತು. ಕಾರ್ಯಾಗಾರ ಮುಗಿಸಿ ಮೇ ೨೪ ರ ಬೆಳಿಗ್ಗೆ ಪ್ಯಾರಿಸ್ನಿಂದ ಬ್ಯಾಂಕಾಕ್ಗೆ ಬಂದಿಳಿದ ನನಗೆ ಎಲ್ಲೂ ವಿಶೇಷ ಬದಲಾವಣೆ ಕಾಣಲಿಲ್ಲ. ತಿಂಗಳಿಗೆ ಎರಡು ಮೂರು ಬಾರಿ ಬ್ಯಾಂಕಾಕ್ನ ಸುವರ್ಣಭೂಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಡುವ ನನಗೆ ಎಲ್ಲೂ ಮಾಮೂಲಿಗಿಂತ ಹೆಚ್ಚಿನ ಪೊಲೀಸರಾಗಲೀ, ಸೈನಿಕರಾಗಲೀ ಕಾಣಲಿಲ್ಲ! ರಸ್ತೆಯಲ್ಲಿ, ಮುಖ್ಯವಾಗಿ ಕೆಲ ಜಂಕ್ಷನ್ಗಳಲ್ಲಿ ಸ್ವಲ್ಪ ಹೆಚ್ಚು ಭದ್ರತೆ ಕಂಡುಬಂತೇ ವಿನಾ ಬೇರೇನೂ ಬದಲಾವಣೆ ಕಾಣಲಿಲ್ಲ. ವಾಹನ ದಟ್ಟಣೆ ಮಾಮೂಲಿನಂತೆಯೇ ಇತ್ತು. ನನ್ನ ಕಚೇರಿ ‘ಬಿಸಿನೆಸ್ ಸ್ಟ್ರೀಟ್’ ಎಂದೇ ಕರೆಯಲ್ಪಡುವ ಬ್ಯಾಂಕಾಕ್ನ ಸಿಲೊಮ್ ಮುಖ್ಯ ರಸ್ತೆಯಲ್ಲಿದೆ.<br /> <br /> ಸೇನಾಡಳಿತ ಆರಂಭವಾದ ದಿನದಿಂದ ಇಂದಿನವರೆಗೂ ಇಲ್ಲಿನ ನಮ್ಮ ಕಚೇರಿ ಕೆಲಸಗಳು ನಿರಾತಂಕವಾಗಿ ಸಾಗಿವೆ. ಸಾಮಾನ್ಯ ಜನರ ಬದುಕು ಆತಂಕದಿಂದ ಕೂಡಿಲ್ಲ. ಮುಖ್ಯವಾಗಿ ಮಧ್ಯಮವರ್ಗದವರಲ್ಲಿ ಒಂದು ಹೊಸ ಬೆಳಕು ಕಾಣುವ ಆಕಾಂಕ್ಷೆ ಮೂಡಿದೆ.<br /> <br /> ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಲೇಖನಗಳನ್ನೋದಿದರೆ ಥಾಯ್ಲೆಂಡ್ನ ಜನ ನಿತ್ಯಭಯದಿಂದ ಏಳುತ್ತಾರೇನೋ ಎನಿಸಬೇಕು! ಥಾಯ್ಲೆಂಡ್ನ ರಾಜಕೀಯ ಬಿಕ್ಕಟ್ಟಿಗೆ ಅಗತ್ಯಕ್ಕಿಂತ ಹೆಚ್ಚು ಬಣ್ಣ ಲೇಪಿಸಿದ್ದು ಕಂಡುಬಂತು. ‘ಜನರೆಲ್ಲಾ ಭಯಭೀತರಾಗಿ ಓಡಾಡುತ್ತಿದ್ದಾರೆ, ನಾಗರಿಕರಲ್ಲಿ ಮನೆಮಾಡಿರುವ ಭಯವನ್ನು ಹೋಗಲಾಡಿಸಲು ಅರೆಬರೆ ಬಟ್ಟೆತೊಟ್ಟ ಹುಡುಗಿಯರಿಂದ ರಸ್ತೆಗಳಲ್ಲಿ ಮನರಂಜನಾ ಕಾರ್ಯಕ್ರಮವನ್ನು ಸೇನೆಯವರು ಆಯೋಜಿಸಿದ್ದಾರೆ’ ಎಂದು ಕೆಲವರು ಬರೆದಿರುವುದು ಸತ್ಯಕ್ಕೆ ದೂರ. ನನ್ನ ಪ್ರಕಾರ ಜನ ಈಗ ಹೆಚ್ಚು ಸಮಾಧಾನದಿಂದಿದ್ದಾರೆ. ಒಳ್ಳೆಯ ಪ್ರಜಾತಂತ್ರ, ಸ್ಥಿರ ಆಡಳಿತ ಬೇಗನೆ ಬರಲಿದೆ ಎಂಬ ಆಶಯದಿಂದ ಇದ್ದಾರೆ.<br /> <br /> ಇಲ್ಲಿ ಸೆಕ್ಸ್ ಟೂರಿಸಮ್ ಇದೆ, ಸ್ಟ್ರಿಪ್ ಬಾರ್, ಡ್ಯಾನ್ಸ್ ಬಾರುಗಳಿವೆ ಎಂಬುದು ನಿಜ; ಆದರೆ ಇವು ಕೆಲವು ನಿರ್ದಿಷ್ಟ ಜಾಗ, ರಸ್ತೆಗಳಲ್ಲಿ ಮಾತ್ರ ನಡೆಯುತ್ತವೆ. ಅಂತಹ ಜಾಗಗಳಲ್ಲಿ ಇಂತಹ ಕಾರ್ಯಕ್ರಮಗಳು ದಿನನಿತ್ಯವೂ ನಡೆಯುತ್ತವೆ! ಅಷ್ಟೇ ಅಲ್ಲ ಅಂತಹ ಸ್ಥಳಗಳು ವಿದೇಶಿ ಪ್ರವಾಸಿಗರಿಂದಲೇ ತುಂಬಿರುತ್ತವೆ ಎಂಬುದೂ ಅಷ್ಟೇ ಸತ್ಯ! ಸೇನಾಡಳಿತ ಬಂದು ಕರ್ಫ್ಯೂ ಹೇರಿದಾಗ ಈ ವ್ಯವಹಾರ ಕೆಲ ದಿನಗಳ ಕಾಲ ನಿಂತಿತ್ತು.<br /> <br /> ಕರ್ಫ್ಯೂ ಸಡಿಲವಾಗುತ್ತಿದ್ದಂತೆ ಮತ್ತೆ ಇವೆಲ್ಲ ಪ್ರಾರಂಭವಾಗಿವೆ. ಥಾಯ್ ಜನರ ಭಯ ನೀಗಿಸುವುದಕ್ಕೆ ಅಗತ್ಯವಿರುವುದು ಇಂತಹ ನೃತ್ಯಗಳಲ್ಲ, ಬದಲಿಗೆ ಭ್ರಷ್ಟಾಚಾರರಹಿತ ಆಡಳಿತ.<br /> <br /> ಈ ವರ್ಷದ ಪ್ರಾರಂಭದಲ್ಲಿ ಥಾಯ್ಲೆಂಡ್ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಥಾಯ್ಲೆಂಡ್ ಪರಿಸ್ಥಿತಿ ಬಗ್ಗೆ ರಂಗು ಹಚ್ಚಿ ವರದಿ ಮಾಡುವುದನ್ನು ಗಮನಿಸಿದ್ದೇನೆ. ಮಾಧ್ಯಮ ದಿಗ್ಗಜರೆನಿಸಿಕೊಂಡಿರುವ ಬಿ.ಬಿ.ಸಿ ಹಾಗೂ ಸಿ.ಎನ್.ಎನ್ ಕೂಡ ಇದನ್ನೇ ಮಾಡುತ್ತಿವೆ.<br /> <br /> ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಎಲ್ಲೋ ಒಂದು ಸರ್ಕಾರಿ ಕಚೇರಿಯ ಮುಂದೆ ನಡೆದ ಕಲ್ಲು ತೂರಾಟವನ್ನು ದಿನವಿಡೀ ತೋರಿಸುತ್ತಾ ಇಡೀ ಬ್ಯಾಂಕಾಕ್ ಪ್ರತಿಭಟನೆಯಿಂದ ತುಂಬಿ ಹೋಯಿತೆಂಬ ಭ್ರಮೆ ಸೃಷ್ಟಿಸಿವೆ.<br /> <br /> ಆದರೆ ಅದೇ ಬ್ಯಾಂಕಾಕ್ನ ಮುಖ್ಯರಸ್ತೆಗಳಲ್ಲಿ ಪ್ರತಿಭಟನೆಯ 6 ಸ್ಥಳಗಳನ್ನು ಹೊರತುಪಡಿಸಿದರೆ, ವಾಹನಗಳ ಓಡಾಟ ವ್ಯವಹಾರಗಳು ಎಂದಿನಂತೆ ಸಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತೇ ಹೊರತು ಮೆಟ್ರೊ ಮಾನೊ ರೈಲು ಸಂಚಾರ ನಿಲ್ಲಲಿಲ್ಲ.<br /> <br /> ಈ ನಡುವೆ, ಅಂತರರಾಷ್ಟ್ರೀಯ ಮಾಧ್ಯಮಗಳು, ಬುದ್ಧಿಜೀವಿಗಳು ಅಮೆರಿಕ ಅಥವಾ ಯುರೋಪಿನ ದೃಷ್ಟಿಕೋನದಿಂದಲೇ ಇಡೀ ವಿಶ್ವನ್ನು ನೋಡುವುದು, ಅಮೆರಿಕ, ಯೂರೋಪಿನ ಸಹಭಾಗಿತ್ವದಿಂದಲೇ ಎಲ್ಲಾ ದೇಶಗಳ ಬಿಕ್ಕಟ್ಟನ್ನು ಸರಿಪಡಿಸುತ್ತೇವೆಂಬ ಭಾವನೆ ಹೊಂದಿರುವುದು ವಿಪರ್ಯಾಸ. ಇವರು ಸ್ಥಳೀಯ ಜನರ ಮನಸ್ಸು, ಹಿನ್ನೆಲೆ, ಸಂಸ್ಕೃತಿಯನ್ನೂ ಕೊಂಚ ಅರ್ಥೈಸಿಕೊಳ್ಳಬೇಕು.<br /> <br /> ೨೦೧೪ರ ಜನವರಿ ೧೩ರಂದು ಸುತೇಪ್ ತೌಗ್ಸುಬಾನ್ ನೇತೃತ್ವದಲ್ಲಿ ಬ್ಯಾಂಕಾಕ್ನಲ್ಲಿ ಆಡಳಿತ ವಿರೋಧಿಸಿ ಪ್ರತಿಭಟನೆ ಆರಂಭವಾದಾಗಲೂ ಜನರ ದೈನಂದಿನ ಬದುಕಿನಲ್ಲಿ ಬದಲಾವಣೆ ಅವಶ್ಯಕತೆ ಬರಲಿಲ್ಲ. ಅದು ಶಾಂತಿಯುತ ಪ್ರತಿಭಟನೆಯಾಗಿತ್ತು.<br /> <br /> ಜ. ೧೩ರಿಂದ ಏ. ೧೦ವರೆಗೆ ಬ್ಯಾಂಕಾಕ್ನ 6 ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಹಗಲು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಂದೆರಡು ಹೇಳಬಹುದಾದ ಹಿಂಸೆಯ ಘಟನೆಗಳು ನಡೆದವು. ಆ ಹಿಂಸೆ ಕೂಡ ನಡೆದದ್ದು ಪ್ರತಿಭಟನಾಕಾರರಿಂದಲ್ಲ ಬದಲಿಗೆ ಸರ್ಕಾರದ ಬೆಂಬಲಿಗರಿಂದ.<br /> <br /> ಪ್ರತಿಭಟನೆಯ ಸ್ವರೂಪ ಆಕರ್ಷಕವಾಗಿತ್ತು. ಅಲ್ಲೊಂದು ಜಾತ್ರೆಯ ವಾತಾವರಣವಿತ್ತು! ಪ್ರತಿಭಟನೆಗಾಗಿ ಇದ್ದ ವೇದಿಕೆಯಲ್ಲಿ ಭಾಷಣಗಳೊಂದಿಗೆ ಸಂಗೀತ ನೃತ್ಯಗಳು ನಡೆದವು. ಅದರ ಸುತ್ತಲೂ ಹಲವಾರು ಅಂಗಡಿಗಳು ಹುಟ್ಟಿಕೊಂಡವು. ಅಲ್ಲಿ ಪ್ರತಿಭಟನಾಕಾರರಿಗೆ ಅಗತ್ಯವಾದ ಆಹಾರ ಮತ್ತು ಹಣ್ಣುಗಳ ಮಾರಾಟ, ಥಾಯ್ ಧ್ವಜದ ಚಿತ್ರವಿರುವ ಹಲವಾರು ನಿತ್ಯೋಪಯೋಗದ ವಸ್ತುಗಳು ಮತ್ತು ಆಟಿಕೆಗಳ ಮಾರಾಟವಾಗುತ್ತಿದ್ದವು.<br /> <br /> ಪ್ರಮುಖ ಭಾಷಣಗಳ ಸಮಯದಲ್ಲಿ ಸುತ್ತಮುತ್ತಲ ಕಚೇರಿಗಳಿಂದ ಉದ್ಯೋಗಿಗಳು, ಶಾಲಾ ಕಾಲೇಜುಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವರ್ತಕರು ಒಂದೆರಡು ಗಂಟೆಗಳ ಕಾಲ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ಸೂಚಿಸಲು ಪ್ರತಿಭಟನೆಯ ಸ್ಥಳಕ್ಕೆ ಬರುತ್ತಿದ್ದರು. ಸೊಂಕ್ರಾನ್ ಹಬ್ಬ (ಥಾಯ್ ಹೊಸವರ್ಷ) ಪ್ರಾರಂಭವಾದಂದಿನಿಂದ ಕಳೆದ ತಿಂಗಳು ಸೇನಾಡಳಿತ ಬರುವವರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಪ್ರತಿಭಟನೆಯನ್ನು ಲುಂಪಿನಿ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು!<br /> <br /> ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಪ್ರತಿಭಟನಾಕಾರರ ಬೇಡಿಕೆ ರಾಜತಾಂತ್ರಿಕವಾಗಿ ಒಂದು ದೊಡ್ಡ ಬಿಕ್ಕಟ್ಟಾಯಿತು. ಏಕೆಂದರೆ ಅವರ ಬೇಡಿಕೆ, ಪ್ರಜಾತಾಂತ್ರಿಕ ಪರಿಹಾರವಾಗಿರಲಿಲ್ಲ.<br /> <br /> ಪ್ರಧಾನಿ ಯಿಂಗ್ಲಕ್ ಶಿನವಾತ್ರ ಹಾಗೂ ಪ್ರತಿಭ-ಟನಾಕಾರರ ನಾಯಕ ಸುತೇಪ್ ನಡುವೆ ಮುಕ್ತ ಚರ್ಚೆ ನಡೆಯಲಿಲ್ಲ. ಹಾಗೆ ನೋಡಿದರೆ ಜನವರಿಯಲ್ಲೇ ಸೇನಾಡಳಿತವನ್ನು ಹೇರಬಹುದಿತ್ತು. ಆದರೆ ಸೇನಾನಾಯಕ ಪ್ರಯುತ್ ರಾಜಕೀಯ ಬಿಕ್ಕಟ್ಟು ಪ್ರಬಲವಾದಾಗಿನಿಂದಲೂ ‘ಮಾತುಕತೆ ಮೂಲಕ ದೇಶದ ಹಿತಕ್ಕೆ ಧಕ್ಕೆಯಾಗದಂತಹ ಒಂದು ಪರಿಹಾರ ಹುಡುಕಿ’ ಎಂದು ಹೇಳುತ್ತಲೇ ಬಂದಿದ್ದಾರೆ.<br /> <br /> ‘ಯಾವುದೇ ಸಂದರ್ಭದಲ್ಲಿಯೂ ಸೇನೆಯು ಜನರ ಹಿತ ಕಾಪಾಡಲು ಆದ್ಯತೆ ಕೊಡುತ್ತದೆ’ ಇದು ಪ್ರಯುತ್ ನಿರಂತರವಾಗಿ ಹೇಳಿಕೊಂಡು ಬಂದಿರುವ ಮಾತು.<br /> <br /> ಥಾಯ್ಲೆಂಡಿನ ಸರ್ವೋಚ್ಚ ನ್ಯಾಯಾಲಯ ಅಧಿಕಾರದಿಂದ ಕೆಳಗಿಳಿಯುವಂತೆ ಆದೇಶ ನೀಡಿದ ನಂತರವೂ ಯಿಂಗ್ಲಕ್ ಶಿನವಾತ್ರ ಉದ್ಧಟತನ ತೋರಿದಾಗ ಸೇನಾಡಳಿತ ಹೇರಲಾಯಿತು ಎಂಬುದನ್ನು ಮರೆಯಬಾರದು.<br /> <br /> ಯಿಂಗ್ಲಕ್ ಮತ್ತು ಆಕೆಯ ಅಣ್ಣ ಉಚ್ಚಾಟಿತ ಮಾಜಿ ಪ್ರಧಾನಿ ತಕ್ಸಿನ್ ಅವರ ಸರ್ಕಾರಕ್ಕೆ ಮೊದಲು ರೈತರ ದೊಡ್ಡ ಬೆಂಬಲ ಇದ್ದುದು ಇಂದು ಅದು ಕಡಿಮೆಯಾಗಿದೆ. ರೈತರು ಸರ್ಕಾರದಿಂದ ಬಾಕಿ ಹಣ ಬರದೆ ಬಸವಳಿದಿದ್ದಾರೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಅಣ್ಣ-ತಂಗಿಯ ಭ್ರಷ್ಟ ಆಡಳಿತ ನೋಡಿ ಸುಸ್ತಾಗಿದ್ದಾರೆ. ಹಾಗೆಂದು ಯಿಂಗ್ಲಕ್ ಶಿನವಾತ್ರಗೆ ಬೆಂಬಲಿಗರೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಸರ್ಕಾರದ ಪ್ರಮುಖರ ಬಂಧನವಾಗಿದೆ, ಪಲಾಯನ ಮಾಡಿದವರ ಮೇಲೆ ನಿರ್ಬಂಧ ಹೇರಲಾಗಿದೆ. ಆದರೆ ಜನರ ಸ್ವಾತಂತ್ರ್ಯ ಸಂಪೂರ್ಣ ಕಳೆದುಹೋಗಿದೆ ಎಂದು ಹೇಳಲಾಗದು.<br /> <br /> ಇವತ್ತಿಗೂ ಥಾಯ್ಲೆಂಡ್ನ ಪ್ರಮುಖ ಪತ್ರಿಕೆ ‘ಬ್ಯಾಂಕಾಕ್ ಪೋಸ್ಟ್’ನಲ್ಲಿ ಸರ್ಕಾರದ ಪರ–ವಿರೋಧ ಅಭಿಪ್ರಾಯಗಳೆರಡೂ ಪ್ರಕಟವಾಗುತ್ತಿವೆ. ಆದಷ್ಟು ಬೇಗ ಪ್ರಜಾತಂತ್ರ ಪುನರ್ ಸ್ಥಾಪಿಸುವುದಾಗಿ ಸೇನಾಧ್ಯಕ್ಷ ಹೇಳುತ್ತಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಸೇನಾಧ್ಯಕ್ಷರೇ ಥಾಯ್ಲೆಂಡ್ ದೇಶದ ಮುಂದಿನ ಪ್ರಧಾನಿಯಾಗಿ ಸ್ವಚ್ಛ ಆಡಳಿತದೊಂದಿಗೆ ದೇಶಕ್ಕೆ ಹೊಸ ಬೆಳಕು ನೀಡಬಹುದೆಂಬ ಆಶಯ ನನ್ನ ಕೆಲ ಥಾಯ್ ಮಿತ್ರರಲ್ಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ತಿಂಗಳು ನಾನು ಪ್ಯಾರಿಸ್ನಲ್ಲಿ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದೆ (ಮೇ ೨೨). ಬ್ಯಾಂಕಾಕ್ನ ಸಹೋದ್ಯೋಗಿಯಿಂದ ನನಗೆ ಮೊಬೈಲ್ ಕರೆ ಬಂತು, ಉತ್ತರಿಸಲಾಗಲಿಲ್ಲ. ಇನ್ನೆರಡು ನಿಮಿಷಕ್ಕೆ ಸಂದೇಶ ಬಂತು: ‘ಥಾಯ್ಲೆಂಡ್ನಲ್ಲಿ ತುರ್ತುಪರಿಸ್ಥಿತಿ ಹೇರಿದ್ದಾರೆ. ನಿನ್ನ ಹೆಂಡತಿ ಹಾಗೂ ಮಗಳಿಗೆ ತೀರಾ ಅಗತ್ಯದ ಹೊರತಾಗಿ ವಸತಿ ಸಮುಚ್ಚಯದಿಂದ ಹೊರಹೋಗದಂತೆ ತಿಳಿಸು. ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸಲು ಹೇಳು. ನಿನಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತೇವೆ’ ಅಂತ.<br /> <br /> ಭಾರತದ ತುರ್ತುಪರಿಸ್ಥಿತಿಯ ಕಥೆಗಳನ್ನು ಕೇಳಿ ತಿಳಿದಿದ್ದ ನನಗೆ ಆತಂಕವಾಯಿತು. ಅಷ್ಟರಲ್ಲಿ ಮನೆಯಿಂದ ಬಂದ ‘ನಾವು ಸುರಕ್ಷಿತವಾಗಿದ್ದೇವೆ, ಚಿಂತಿಸಬೇಕಾಗಿಲ್ಲ’ ಎಂಬ ಸಂದೇಶ ಮನಸ್ಸಿಗೆ ಸಮಾಧಾನ ತಂದಿತು. ಕಾರ್ಯಾಗಾರ ಮುಗಿಸಿ ಮೇ ೨೪ ರ ಬೆಳಿಗ್ಗೆ ಪ್ಯಾರಿಸ್ನಿಂದ ಬ್ಯಾಂಕಾಕ್ಗೆ ಬಂದಿಳಿದ ನನಗೆ ಎಲ್ಲೂ ವಿಶೇಷ ಬದಲಾವಣೆ ಕಾಣಲಿಲ್ಲ. ತಿಂಗಳಿಗೆ ಎರಡು ಮೂರು ಬಾರಿ ಬ್ಯಾಂಕಾಕ್ನ ಸುವರ್ಣಭೂಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಡುವ ನನಗೆ ಎಲ್ಲೂ ಮಾಮೂಲಿಗಿಂತ ಹೆಚ್ಚಿನ ಪೊಲೀಸರಾಗಲೀ, ಸೈನಿಕರಾಗಲೀ ಕಾಣಲಿಲ್ಲ! ರಸ್ತೆಯಲ್ಲಿ, ಮುಖ್ಯವಾಗಿ ಕೆಲ ಜಂಕ್ಷನ್ಗಳಲ್ಲಿ ಸ್ವಲ್ಪ ಹೆಚ್ಚು ಭದ್ರತೆ ಕಂಡುಬಂತೇ ವಿನಾ ಬೇರೇನೂ ಬದಲಾವಣೆ ಕಾಣಲಿಲ್ಲ. ವಾಹನ ದಟ್ಟಣೆ ಮಾಮೂಲಿನಂತೆಯೇ ಇತ್ತು. ನನ್ನ ಕಚೇರಿ ‘ಬಿಸಿನೆಸ್ ಸ್ಟ್ರೀಟ್’ ಎಂದೇ ಕರೆಯಲ್ಪಡುವ ಬ್ಯಾಂಕಾಕ್ನ ಸಿಲೊಮ್ ಮುಖ್ಯ ರಸ್ತೆಯಲ್ಲಿದೆ.<br /> <br /> ಸೇನಾಡಳಿತ ಆರಂಭವಾದ ದಿನದಿಂದ ಇಂದಿನವರೆಗೂ ಇಲ್ಲಿನ ನಮ್ಮ ಕಚೇರಿ ಕೆಲಸಗಳು ನಿರಾತಂಕವಾಗಿ ಸಾಗಿವೆ. ಸಾಮಾನ್ಯ ಜನರ ಬದುಕು ಆತಂಕದಿಂದ ಕೂಡಿಲ್ಲ. ಮುಖ್ಯವಾಗಿ ಮಧ್ಯಮವರ್ಗದವರಲ್ಲಿ ಒಂದು ಹೊಸ ಬೆಳಕು ಕಾಣುವ ಆಕಾಂಕ್ಷೆ ಮೂಡಿದೆ.<br /> <br /> ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಲೇಖನಗಳನ್ನೋದಿದರೆ ಥಾಯ್ಲೆಂಡ್ನ ಜನ ನಿತ್ಯಭಯದಿಂದ ಏಳುತ್ತಾರೇನೋ ಎನಿಸಬೇಕು! ಥಾಯ್ಲೆಂಡ್ನ ರಾಜಕೀಯ ಬಿಕ್ಕಟ್ಟಿಗೆ ಅಗತ್ಯಕ್ಕಿಂತ ಹೆಚ್ಚು ಬಣ್ಣ ಲೇಪಿಸಿದ್ದು ಕಂಡುಬಂತು. ‘ಜನರೆಲ್ಲಾ ಭಯಭೀತರಾಗಿ ಓಡಾಡುತ್ತಿದ್ದಾರೆ, ನಾಗರಿಕರಲ್ಲಿ ಮನೆಮಾಡಿರುವ ಭಯವನ್ನು ಹೋಗಲಾಡಿಸಲು ಅರೆಬರೆ ಬಟ್ಟೆತೊಟ್ಟ ಹುಡುಗಿಯರಿಂದ ರಸ್ತೆಗಳಲ್ಲಿ ಮನರಂಜನಾ ಕಾರ್ಯಕ್ರಮವನ್ನು ಸೇನೆಯವರು ಆಯೋಜಿಸಿದ್ದಾರೆ’ ಎಂದು ಕೆಲವರು ಬರೆದಿರುವುದು ಸತ್ಯಕ್ಕೆ ದೂರ. ನನ್ನ ಪ್ರಕಾರ ಜನ ಈಗ ಹೆಚ್ಚು ಸಮಾಧಾನದಿಂದಿದ್ದಾರೆ. ಒಳ್ಳೆಯ ಪ್ರಜಾತಂತ್ರ, ಸ್ಥಿರ ಆಡಳಿತ ಬೇಗನೆ ಬರಲಿದೆ ಎಂಬ ಆಶಯದಿಂದ ಇದ್ದಾರೆ.<br /> <br /> ಇಲ್ಲಿ ಸೆಕ್ಸ್ ಟೂರಿಸಮ್ ಇದೆ, ಸ್ಟ್ರಿಪ್ ಬಾರ್, ಡ್ಯಾನ್ಸ್ ಬಾರುಗಳಿವೆ ಎಂಬುದು ನಿಜ; ಆದರೆ ಇವು ಕೆಲವು ನಿರ್ದಿಷ್ಟ ಜಾಗ, ರಸ್ತೆಗಳಲ್ಲಿ ಮಾತ್ರ ನಡೆಯುತ್ತವೆ. ಅಂತಹ ಜಾಗಗಳಲ್ಲಿ ಇಂತಹ ಕಾರ್ಯಕ್ರಮಗಳು ದಿನನಿತ್ಯವೂ ನಡೆಯುತ್ತವೆ! ಅಷ್ಟೇ ಅಲ್ಲ ಅಂತಹ ಸ್ಥಳಗಳು ವಿದೇಶಿ ಪ್ರವಾಸಿಗರಿಂದಲೇ ತುಂಬಿರುತ್ತವೆ ಎಂಬುದೂ ಅಷ್ಟೇ ಸತ್ಯ! ಸೇನಾಡಳಿತ ಬಂದು ಕರ್ಫ್ಯೂ ಹೇರಿದಾಗ ಈ ವ್ಯವಹಾರ ಕೆಲ ದಿನಗಳ ಕಾಲ ನಿಂತಿತ್ತು.<br /> <br /> ಕರ್ಫ್ಯೂ ಸಡಿಲವಾಗುತ್ತಿದ್ದಂತೆ ಮತ್ತೆ ಇವೆಲ್ಲ ಪ್ರಾರಂಭವಾಗಿವೆ. ಥಾಯ್ ಜನರ ಭಯ ನೀಗಿಸುವುದಕ್ಕೆ ಅಗತ್ಯವಿರುವುದು ಇಂತಹ ನೃತ್ಯಗಳಲ್ಲ, ಬದಲಿಗೆ ಭ್ರಷ್ಟಾಚಾರರಹಿತ ಆಡಳಿತ.<br /> <br /> ಈ ವರ್ಷದ ಪ್ರಾರಂಭದಲ್ಲಿ ಥಾಯ್ಲೆಂಡ್ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಥಾಯ್ಲೆಂಡ್ ಪರಿಸ್ಥಿತಿ ಬಗ್ಗೆ ರಂಗು ಹಚ್ಚಿ ವರದಿ ಮಾಡುವುದನ್ನು ಗಮನಿಸಿದ್ದೇನೆ. ಮಾಧ್ಯಮ ದಿಗ್ಗಜರೆನಿಸಿಕೊಂಡಿರುವ ಬಿ.ಬಿ.ಸಿ ಹಾಗೂ ಸಿ.ಎನ್.ಎನ್ ಕೂಡ ಇದನ್ನೇ ಮಾಡುತ್ತಿವೆ.<br /> <br /> ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಎಲ್ಲೋ ಒಂದು ಸರ್ಕಾರಿ ಕಚೇರಿಯ ಮುಂದೆ ನಡೆದ ಕಲ್ಲು ತೂರಾಟವನ್ನು ದಿನವಿಡೀ ತೋರಿಸುತ್ತಾ ಇಡೀ ಬ್ಯಾಂಕಾಕ್ ಪ್ರತಿಭಟನೆಯಿಂದ ತುಂಬಿ ಹೋಯಿತೆಂಬ ಭ್ರಮೆ ಸೃಷ್ಟಿಸಿವೆ.<br /> <br /> ಆದರೆ ಅದೇ ಬ್ಯಾಂಕಾಕ್ನ ಮುಖ್ಯರಸ್ತೆಗಳಲ್ಲಿ ಪ್ರತಿಭಟನೆಯ 6 ಸ್ಥಳಗಳನ್ನು ಹೊರತುಪಡಿಸಿದರೆ, ವಾಹನಗಳ ಓಡಾಟ ವ್ಯವಹಾರಗಳು ಎಂದಿನಂತೆ ಸಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತೇ ಹೊರತು ಮೆಟ್ರೊ ಮಾನೊ ರೈಲು ಸಂಚಾರ ನಿಲ್ಲಲಿಲ್ಲ.<br /> <br /> ಈ ನಡುವೆ, ಅಂತರರಾಷ್ಟ್ರೀಯ ಮಾಧ್ಯಮಗಳು, ಬುದ್ಧಿಜೀವಿಗಳು ಅಮೆರಿಕ ಅಥವಾ ಯುರೋಪಿನ ದೃಷ್ಟಿಕೋನದಿಂದಲೇ ಇಡೀ ವಿಶ್ವನ್ನು ನೋಡುವುದು, ಅಮೆರಿಕ, ಯೂರೋಪಿನ ಸಹಭಾಗಿತ್ವದಿಂದಲೇ ಎಲ್ಲಾ ದೇಶಗಳ ಬಿಕ್ಕಟ್ಟನ್ನು ಸರಿಪಡಿಸುತ್ತೇವೆಂಬ ಭಾವನೆ ಹೊಂದಿರುವುದು ವಿಪರ್ಯಾಸ. ಇವರು ಸ್ಥಳೀಯ ಜನರ ಮನಸ್ಸು, ಹಿನ್ನೆಲೆ, ಸಂಸ್ಕೃತಿಯನ್ನೂ ಕೊಂಚ ಅರ್ಥೈಸಿಕೊಳ್ಳಬೇಕು.<br /> <br /> ೨೦೧೪ರ ಜನವರಿ ೧೩ರಂದು ಸುತೇಪ್ ತೌಗ್ಸುಬಾನ್ ನೇತೃತ್ವದಲ್ಲಿ ಬ್ಯಾಂಕಾಕ್ನಲ್ಲಿ ಆಡಳಿತ ವಿರೋಧಿಸಿ ಪ್ರತಿಭಟನೆ ಆರಂಭವಾದಾಗಲೂ ಜನರ ದೈನಂದಿನ ಬದುಕಿನಲ್ಲಿ ಬದಲಾವಣೆ ಅವಶ್ಯಕತೆ ಬರಲಿಲ್ಲ. ಅದು ಶಾಂತಿಯುತ ಪ್ರತಿಭಟನೆಯಾಗಿತ್ತು.<br /> <br /> ಜ. ೧೩ರಿಂದ ಏ. ೧೦ವರೆಗೆ ಬ್ಯಾಂಕಾಕ್ನ 6 ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಹಗಲು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಂದೆರಡು ಹೇಳಬಹುದಾದ ಹಿಂಸೆಯ ಘಟನೆಗಳು ನಡೆದವು. ಆ ಹಿಂಸೆ ಕೂಡ ನಡೆದದ್ದು ಪ್ರತಿಭಟನಾಕಾರರಿಂದಲ್ಲ ಬದಲಿಗೆ ಸರ್ಕಾರದ ಬೆಂಬಲಿಗರಿಂದ.<br /> <br /> ಪ್ರತಿಭಟನೆಯ ಸ್ವರೂಪ ಆಕರ್ಷಕವಾಗಿತ್ತು. ಅಲ್ಲೊಂದು ಜಾತ್ರೆಯ ವಾತಾವರಣವಿತ್ತು! ಪ್ರತಿಭಟನೆಗಾಗಿ ಇದ್ದ ವೇದಿಕೆಯಲ್ಲಿ ಭಾಷಣಗಳೊಂದಿಗೆ ಸಂಗೀತ ನೃತ್ಯಗಳು ನಡೆದವು. ಅದರ ಸುತ್ತಲೂ ಹಲವಾರು ಅಂಗಡಿಗಳು ಹುಟ್ಟಿಕೊಂಡವು. ಅಲ್ಲಿ ಪ್ರತಿಭಟನಾಕಾರರಿಗೆ ಅಗತ್ಯವಾದ ಆಹಾರ ಮತ್ತು ಹಣ್ಣುಗಳ ಮಾರಾಟ, ಥಾಯ್ ಧ್ವಜದ ಚಿತ್ರವಿರುವ ಹಲವಾರು ನಿತ್ಯೋಪಯೋಗದ ವಸ್ತುಗಳು ಮತ್ತು ಆಟಿಕೆಗಳ ಮಾರಾಟವಾಗುತ್ತಿದ್ದವು.<br /> <br /> ಪ್ರಮುಖ ಭಾಷಣಗಳ ಸಮಯದಲ್ಲಿ ಸುತ್ತಮುತ್ತಲ ಕಚೇರಿಗಳಿಂದ ಉದ್ಯೋಗಿಗಳು, ಶಾಲಾ ಕಾಲೇಜುಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವರ್ತಕರು ಒಂದೆರಡು ಗಂಟೆಗಳ ಕಾಲ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ಸೂಚಿಸಲು ಪ್ರತಿಭಟನೆಯ ಸ್ಥಳಕ್ಕೆ ಬರುತ್ತಿದ್ದರು. ಸೊಂಕ್ರಾನ್ ಹಬ್ಬ (ಥಾಯ್ ಹೊಸವರ್ಷ) ಪ್ರಾರಂಭವಾದಂದಿನಿಂದ ಕಳೆದ ತಿಂಗಳು ಸೇನಾಡಳಿತ ಬರುವವರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಪ್ರತಿಭಟನೆಯನ್ನು ಲುಂಪಿನಿ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು!<br /> <br /> ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಪ್ರತಿಭಟನಾಕಾರರ ಬೇಡಿಕೆ ರಾಜತಾಂತ್ರಿಕವಾಗಿ ಒಂದು ದೊಡ್ಡ ಬಿಕ್ಕಟ್ಟಾಯಿತು. ಏಕೆಂದರೆ ಅವರ ಬೇಡಿಕೆ, ಪ್ರಜಾತಾಂತ್ರಿಕ ಪರಿಹಾರವಾಗಿರಲಿಲ್ಲ.<br /> <br /> ಪ್ರಧಾನಿ ಯಿಂಗ್ಲಕ್ ಶಿನವಾತ್ರ ಹಾಗೂ ಪ್ರತಿಭ-ಟನಾಕಾರರ ನಾಯಕ ಸುತೇಪ್ ನಡುವೆ ಮುಕ್ತ ಚರ್ಚೆ ನಡೆಯಲಿಲ್ಲ. ಹಾಗೆ ನೋಡಿದರೆ ಜನವರಿಯಲ್ಲೇ ಸೇನಾಡಳಿತವನ್ನು ಹೇರಬಹುದಿತ್ತು. ಆದರೆ ಸೇನಾನಾಯಕ ಪ್ರಯುತ್ ರಾಜಕೀಯ ಬಿಕ್ಕಟ್ಟು ಪ್ರಬಲವಾದಾಗಿನಿಂದಲೂ ‘ಮಾತುಕತೆ ಮೂಲಕ ದೇಶದ ಹಿತಕ್ಕೆ ಧಕ್ಕೆಯಾಗದಂತಹ ಒಂದು ಪರಿಹಾರ ಹುಡುಕಿ’ ಎಂದು ಹೇಳುತ್ತಲೇ ಬಂದಿದ್ದಾರೆ.<br /> <br /> ‘ಯಾವುದೇ ಸಂದರ್ಭದಲ್ಲಿಯೂ ಸೇನೆಯು ಜನರ ಹಿತ ಕಾಪಾಡಲು ಆದ್ಯತೆ ಕೊಡುತ್ತದೆ’ ಇದು ಪ್ರಯುತ್ ನಿರಂತರವಾಗಿ ಹೇಳಿಕೊಂಡು ಬಂದಿರುವ ಮಾತು.<br /> <br /> ಥಾಯ್ಲೆಂಡಿನ ಸರ್ವೋಚ್ಚ ನ್ಯಾಯಾಲಯ ಅಧಿಕಾರದಿಂದ ಕೆಳಗಿಳಿಯುವಂತೆ ಆದೇಶ ನೀಡಿದ ನಂತರವೂ ಯಿಂಗ್ಲಕ್ ಶಿನವಾತ್ರ ಉದ್ಧಟತನ ತೋರಿದಾಗ ಸೇನಾಡಳಿತ ಹೇರಲಾಯಿತು ಎಂಬುದನ್ನು ಮರೆಯಬಾರದು.<br /> <br /> ಯಿಂಗ್ಲಕ್ ಮತ್ತು ಆಕೆಯ ಅಣ್ಣ ಉಚ್ಚಾಟಿತ ಮಾಜಿ ಪ್ರಧಾನಿ ತಕ್ಸಿನ್ ಅವರ ಸರ್ಕಾರಕ್ಕೆ ಮೊದಲು ರೈತರ ದೊಡ್ಡ ಬೆಂಬಲ ಇದ್ದುದು ಇಂದು ಅದು ಕಡಿಮೆಯಾಗಿದೆ. ರೈತರು ಸರ್ಕಾರದಿಂದ ಬಾಕಿ ಹಣ ಬರದೆ ಬಸವಳಿದಿದ್ದಾರೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಅಣ್ಣ-ತಂಗಿಯ ಭ್ರಷ್ಟ ಆಡಳಿತ ನೋಡಿ ಸುಸ್ತಾಗಿದ್ದಾರೆ. ಹಾಗೆಂದು ಯಿಂಗ್ಲಕ್ ಶಿನವಾತ್ರಗೆ ಬೆಂಬಲಿಗರೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಸರ್ಕಾರದ ಪ್ರಮುಖರ ಬಂಧನವಾಗಿದೆ, ಪಲಾಯನ ಮಾಡಿದವರ ಮೇಲೆ ನಿರ್ಬಂಧ ಹೇರಲಾಗಿದೆ. ಆದರೆ ಜನರ ಸ್ವಾತಂತ್ರ್ಯ ಸಂಪೂರ್ಣ ಕಳೆದುಹೋಗಿದೆ ಎಂದು ಹೇಳಲಾಗದು.<br /> <br /> ಇವತ್ತಿಗೂ ಥಾಯ್ಲೆಂಡ್ನ ಪ್ರಮುಖ ಪತ್ರಿಕೆ ‘ಬ್ಯಾಂಕಾಕ್ ಪೋಸ್ಟ್’ನಲ್ಲಿ ಸರ್ಕಾರದ ಪರ–ವಿರೋಧ ಅಭಿಪ್ರಾಯಗಳೆರಡೂ ಪ್ರಕಟವಾಗುತ್ತಿವೆ. ಆದಷ್ಟು ಬೇಗ ಪ್ರಜಾತಂತ್ರ ಪುನರ್ ಸ್ಥಾಪಿಸುವುದಾಗಿ ಸೇನಾಧ್ಯಕ್ಷ ಹೇಳುತ್ತಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಸೇನಾಧ್ಯಕ್ಷರೇ ಥಾಯ್ಲೆಂಡ್ ದೇಶದ ಮುಂದಿನ ಪ್ರಧಾನಿಯಾಗಿ ಸ್ವಚ್ಛ ಆಡಳಿತದೊಂದಿಗೆ ದೇಶಕ್ಕೆ ಹೊಸ ಬೆಳಕು ನೀಡಬಹುದೆಂಬ ಆಶಯ ನನ್ನ ಕೆಲ ಥಾಯ್ ಮಿತ್ರರಲ್ಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>