<p><strong>ಹನುಮಸಾಗರ</strong>: ಸಮೀಪದ ಮೀಯಾಪುರ ಗ್ರಾಮದ ಗುರುಸಿದ್ದಪ್ಪ ಹನುಮಪ್ಪ ಶಿರೂರ ಅವರ ತೋಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ದಾಳಿಂಬೆ ಗಿಡ, ತೆಂಗಿನ ಮರಗಳು ಬೆಂಕಿಗೆ ಆಹುತಿಯಾದವು.<br /> <br /> ತೋಟದ ಬದುವಿನಲ್ಲಿ ಕಾಣಿಸಿಕೊಂಡು ಬೆಂಕಿ ಗಾಳಿ ಬೀಸಿದ್ದರಿಂದ ಎಲ್ಲೆಡೆ ಹಬ್ಬಿದ್ದರಿಂದ ಸುಮಾರು 3 ಎಕರೆ 10 ಗುಂಟೆ ಜಮೀನಿನಲ್ಲಿ ದಾಳಿಂಬೆ, ಪಪ್ಪಾಯಿ, ಕಿನೋ, ಹೆಬ್ಬೇವು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿವೆ.<br /> <br /> ದಾಳಿಂಬೆ ಬೆಳೆ ಹೂವು, ಹೂಚುಗಳಿಂದ ತುಂಬಿತ್ತು, ಲಕ್ಷಾಂತರ ರೂಪಾಯಿ ಸಾಲ ಮಾಡಿದ ಬೆಳೆ ಬೆಂಕಿಗೆ ಆಹುತಿಯಾಗಿದೆ ಎಂದು ರೈತ ಹನುಮಪ್ಪ ನೋವು ತೋಡಿಕೊಂಡರು.<br /> <br /> ಬೆಂಕಿಗೆ 60 ರಿಂದ 70 ತೆಂಗಿನಗಿಡಗಳು, ಸುಮಾರು ರೂ 1.5 ಲಕ್ಷ ವೆಚ್ಚದಲ್ಲಿ ಹಾಕಿದ್ದ ತಂತಿ ಬೇಲಿ ಹಾನಿಗೀಡಾಗಿದೆ.<br /> ರಸ್ತೆ ಸರಿಯಾಗಿಲ್ಲದ ಕಾರಣ ಅಗ್ನಿಶಾಮಕ ದಳದವರು ಬರಲು ತಡವಾಯಿತು. ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತೋಟದ ಮಾಲಿಕ ಗುರುಸಿದ್ದಪ್ಪ ಶಿರೂರ ತಿಳಿಸಿದರು. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ</strong>: ಸಮೀಪದ ಮೀಯಾಪುರ ಗ್ರಾಮದ ಗುರುಸಿದ್ದಪ್ಪ ಹನುಮಪ್ಪ ಶಿರೂರ ಅವರ ತೋಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ದಾಳಿಂಬೆ ಗಿಡ, ತೆಂಗಿನ ಮರಗಳು ಬೆಂಕಿಗೆ ಆಹುತಿಯಾದವು.<br /> <br /> ತೋಟದ ಬದುವಿನಲ್ಲಿ ಕಾಣಿಸಿಕೊಂಡು ಬೆಂಕಿ ಗಾಳಿ ಬೀಸಿದ್ದರಿಂದ ಎಲ್ಲೆಡೆ ಹಬ್ಬಿದ್ದರಿಂದ ಸುಮಾರು 3 ಎಕರೆ 10 ಗುಂಟೆ ಜಮೀನಿನಲ್ಲಿ ದಾಳಿಂಬೆ, ಪಪ್ಪಾಯಿ, ಕಿನೋ, ಹೆಬ್ಬೇವು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿವೆ.<br /> <br /> ದಾಳಿಂಬೆ ಬೆಳೆ ಹೂವು, ಹೂಚುಗಳಿಂದ ತುಂಬಿತ್ತು, ಲಕ್ಷಾಂತರ ರೂಪಾಯಿ ಸಾಲ ಮಾಡಿದ ಬೆಳೆ ಬೆಂಕಿಗೆ ಆಹುತಿಯಾಗಿದೆ ಎಂದು ರೈತ ಹನುಮಪ್ಪ ನೋವು ತೋಡಿಕೊಂಡರು.<br /> <br /> ಬೆಂಕಿಗೆ 60 ರಿಂದ 70 ತೆಂಗಿನಗಿಡಗಳು, ಸುಮಾರು ರೂ 1.5 ಲಕ್ಷ ವೆಚ್ಚದಲ್ಲಿ ಹಾಕಿದ್ದ ತಂತಿ ಬೇಲಿ ಹಾನಿಗೀಡಾಗಿದೆ.<br /> ರಸ್ತೆ ಸರಿಯಾಗಿಲ್ಲದ ಕಾರಣ ಅಗ್ನಿಶಾಮಕ ದಳದವರು ಬರಲು ತಡವಾಯಿತು. ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತೋಟದ ಮಾಲಿಕ ಗುರುಸಿದ್ದಪ್ಪ ಶಿರೂರ ತಿಳಿಸಿದರು. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>