ಯುಕ್ತಾಯುಕ್ತ ವಿವೇಚನೆಯನ್ನು ನಮ್ಮ ಯುವಜನತೆ ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದೆ ಅನ್ನುವುದಕ್ಕೆ ಸ್ಪಷ್ಟ ನಿದರ್ಶನ ನನಗೆ ಕಂಡುಬರುತ್ತಿದೆ.
ಇಲ್ಲದಿದ್ದರೆ ಜಗತ್ತೇ ನಿಬ್ಬೆರಗಾಗಿ ಗಮನಿಸುತ್ತಿದ್ದ ಘಟನೆಯೊಂದು ಭಾರತದಲ್ಲಿ, ಅದೂ ಭಾರತೀಯರಿಂದ ಜರುಗಿದುದನ್ನು ಕಂಡು ಸಂಭ್ರಮಿಸದಂತಹ ಪರಿಸ್ಥಿತಿ ನಮ್ಮ ಯುವಜನತೆಗೆ ಏಕೆ ಬರುತ್ತಿತ್ತು?
ಅತ್ಯಂತ ಕಡಿಮೆ ಬಜೆಟ್ನಲ್ಲಿ, ಮೊದಲ ಪ್ರಯತ್ನದಲ್ಲೇ ಮಂಗಳಗ್ರಹಕ್ಕೆ ಯಂತ್ರವೊಂದನ್ನು ಕಳಿಸಿ ದಾಖಲೆ ನಿರ್ಮಿಸಿದ ಭಾರತದ ಇಸ್ರೊ ವಿಜ್ಞಾನಿಗಳನ್ನು ಶ್ಲಾಘಿಸದೆ ಇರಲಿಕ್ಕೆ ಕಾರಣಗಳೇ ಇಲ್ಲ.
ಸಣ್ಣ ಪುಟ್ಟ ಕ್ರಿಕೆಟ್ ಗೆಲುವಿಗೂ ಪಟಾಕಿ ಸಿಡಿಸಿ ಸಂಭ್ರಮಿಸುವ ಕ್ರಿಕೆಟ್ ಪ್ರೇಮಿಗಳ ಪಟಾಕಿಯು ಈ ಸಂದರ್ಭದಲ್ಲಿ ಒದ್ದೆಯಾಗಿ ಹೋಗಿತ್ತೇನು?