ಈ ಮೂಲಕ ಸಂಗ್ರಹಗೊಂಡ ಕೋಟಿಗಟ್ಟಲೆ ಹಣವನ್ನು ಗ್ರಂಥಾಲಯ ಇಲಾಖೆಗೆ ಪಾವತಿಸದಿರುವದು ವಿಷಾದನೀಯ. ಆರ್ಥಿಕ ಮುಗ್ಗಟ್ಟಿನಿಂದ ವಾಚನಾಲಯಗಳು ಸೊರಗುತ್ತಿವೆ. ಗ್ರಂಥ ಖರೀದಿಯೂ ಸ್ಥಗಿತಗೊಂಡಿದೆ. ಇದು ಕಳವಳಕಾರಿ. ಪುಸ್ತಕ ಪ್ರಕಾಶನಕ್ಕೂ ಇದರ ಬಿಸಿ ತಟ್ಟದೇ ಇರದು.
ದೃಶ್ಯ ಮಾಧ್ಯಮದ ಸೆಳೆತ, ಓದುವ ಪ್ರವೃತ್ತಿಯನ್ನು ಈಗಾಗಲೆ ಕುಂಠಿತಗೊಳಿಸಿದೆ. ಅದು ಇನ್ನಷ್ಟು ಕ್ಷೀಣಿಸುವುದು ಬೇಡ. ಪುಸ್ತಕ ಸಂಸ್ಕೃತಿ ಪೋಷಣೆ ಸರ್ಕಾರದ ಕರ್ತವ್ಯ. ಅದನ್ನು ಮರೆಯುವುದು ಸರಿಯಲ್ಲ.