ಚೆನ್ನೈ (ಪಿಟಿಐ): ಆಪ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶಂಕಿತ ತಾಲಿಬಾನ್ ಉಗ್ರರಿಂದ ಅಪಹರಣಕ್ಕೊಳಗಾಗಿರುವ ಭಾರತದ ನೆರವು ಕಾರ್ಯಕರ್ತ ಫಾದರ್ ಅಲೆಕ್ಸಿಸ್ ಪ್ರೇಮ್ಕುಮಾರ್ ಅವರ ಬಿಡುಗಡೆ ವಿಷಯವನ್ನು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಬಳಿ ಈಗಾಗಲೇ ಪ್ರಸ್ತಾಪಿಸಿದ್ದಾಗಿ ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್ ಶನಿವಾರ ಹೇಳಿದ್ದಾರೆ.
‘ನಾನು ಈ ಸಂಬಂಧ ಸುಷ್ಮಾ ಸ್ವರಾಜ್ ಬಳಿ ಮಾತನಾಡಿದ್ದೇನೆ. ಅಲ್ಲದೇ ಪತ್ರವನ್ನೂ ಬರೆದಿದ್ದೇನೆ. ಇದೊಂದು ದುರದೃಷ್ಟಕರ ಘಟನೆ. ಪ್ರೇಮ್ಕುಮಾರ್ ಬಿಡುಗಡೆಗೆ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಾರೆನ್ನುವ ಭರವಸೆ ಇದೆ’ ಎಂದು ತಿಳಿಸಿದರು.