ಚೆನ್ನೈ (ಪಿಟಿಐ) : ‘ಅವಿರತ ಶ್ರಮ ಮತ್ತು ಅಪಾರ ಬುದ್ಧಿವಂತಿಕೆಯಿಂದ ದೇಶದಲ್ಲಿ ಉತ್ತಮ ನಾಯಕನಾಗುವ ಹಾದಿಯಲ್ಲಿ ನರೇಂದ್ರ ಮೋದಿ ಬೆಳೆಯುತ್ತಿವುದು ಶ್ಲಾಘನಾರ್ಹ’ ಎಂದು ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಬುಧವಾರ ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಬಿಜೆಪಿಯ ಭರ್ಜರಿ ಗೆಲುವಿಗೆ ಕಾರಣರಾದ ಮೋದಿ ಅವರ ಗುಣಗಾನ ಮಾಡಿದರು.
’ಪ್ರಧಾನ ಮಂತ್ರಿಯಾಗಿ ದೇಶದ ಎಲ್ಲಾ ವರ್ಗದವರ ಮಹತ್ವಾಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಯಶಸ್ವಿಯಾಗುವಂತೆ ಪಕ್ಷದ ಪರವಾಗಿ ಹಾರೈಸುತ್ತೇನೆ’ ಎಂದರು.