<p><strong>ನವದೆಹಲಿ/ ಜೈಪುರ:</strong> ರಾಜಸ್ತಾನದಲ್ಲಿ ಬಿಜೆಪಿ ಚುನಾವಣಾ ಹೋರಾಟವನ್ನು ಮುನ್ನಡೆಸಿದ್ದ ವಸುಂಧರಾ ರಾಜೆ ಸಿಂಧಿಯಾ, ತಮ್ಮ ಪಕ್ಷದ ಭರ್ಜರಿ ಗೆಲುವಿಗೆ ನರೇಂದ್ರ ಮೋದಿ ಅವರ ವರ್ಚಸ್ಸೇ ಕಾರಣ ಎಂದಿದ್ದಾರೆ.<br /> <br /> ‘ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಇಲ್ಲಿನ ಚುನಾವಣೆ ಮೇಲೆ ಬಹುದೊಡ್ಡ ಪ್ರಭಾವ ಬೀರಿದರು. ಗುಜರಾತ್ ಮುಖ್ಯಮಂತ್ರಿಯಾಗಿ ಅವರೇನು ಮಾಡಿದ್ದಾರೆ ಎಂಬುದನ್ನು ಜನತೆ ಗಮನಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಅಂತಿಮ ಪೈಪೋಟಿಗೆ ಮುಂಚಿನ ಸೆಮಿಫೈನಲ್ ಇದಾಗಿದೆ. ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆಂಬುದಕ್ಕೆ ಇವತ್ತಿನ ಫಲಿತಾಂಶ ಶುಭಸೂಚನೆಯಾಗಿದೆ’ ಎಂದು ಎರಡನೇ ಬಾರಿಗೆ ರಾಜಸ್ತಾನದ ಮುಖ್ಯಮಂತ್ರಿ ಆಗುವ ಹೊಸ್ತಿಲಲ್ಲಿರುವ ವಸುಂಧರಾ ಅಭಿಪ್ರಾಯಪಟ್ಟರು.<br /> <br /> <strong>ಬಿಜೆಪಿ ಅಪಪ್ರಚಾರ: ಗೆಹ್ಲೋಟ್</strong><br /> ನಿರ್ಗಮಿತ ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಮಾತನಾಡಿ, ಬಿಜೆಪಿ ನಡೆಸಿದ ಅಪಪ್ರಚಾರವೇ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಎಂದಿದ್ದಾರೆ.<br /> <br /> ‘ನಮ್ಮ ಸೋಲಿಗೆ ಕಾರಣವೇ ಇರಲಿಲ್ಲ. ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಪ್ರಚಾರ ನಡೆಸಿದ್ದೆವು. ಆದರೆ ಜನರನ್ನು ತಲುಪಲು ನಾವು ವಿಫಲವಾದೆವು’ ಎಂದು ಗೆಹ್ಲಾಟ್ ಹೇಳಿದ್ದಾರೆ.<br /> <br /> ‘ರಾಜಸ್ತಾನದಲ್ಲಿ ಸರ್ಕಾರದ ವಿರೋಧಿ ಅಲೆ ಗುಪ್ತಗಾಮಿನಿಯಂತೆ ವರ್ತಿಸಿದೆ. ಇಂತಹ ಗುಪ್ತಗಾಮಿನಿ ಶಕ್ತಿ ಇದ್ದಾಗ ಯಾರೂ ಏನನ್ನೂ ಮಾಡಲಾಗದು. ಸರ್ಕಾರ ಆಡಳಿತದಲ್ಲಿದ್ದಾಗ ಜನಪರ ಯೋಜನೆಗಳನ್ನೇ ಜಾರಿಗೊಳಿಸಿದೆ. ಆದರೆ ನಾವು ಹಮ್ಮಿಕೊಂಡ ಯೋಜನೆಗಳನ್ನು ಚುನಾವಣಾ ವಿಷಯಗಳನ್ನಾಗಿ ಮಾಡಲು ಪಕ್ಷ ವಿಫಲವಾಯಿತು’ ಎಂದು ಅವರು ವಿಶ್ಲೇಷಿಸಿದ್ದಾರೆ.<br /> <br /> ವಸುಂಧರಾ ರಾಜೆ ಅವರು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೋರಿದ್ದರು. ಹೀಗಾಗಿ ಬಿಜೆಪಿ ಗೆಲುವಿಗೆ ವಸುಂಧರಾ ಕಾರಣವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> <br /> ರಾಜಸ್ತಾನದಲ್ಲಿ ಎರಡೂ ಪಕ್ಷಗಳ ಉನ್ನತ ನಾಯಕರು ಭರಾಟೆಯ ಪ್ರಚಾರ ನಡೆಸಿದ್ದರು. ಒಂದೆಡೆ ನರೇಂದ್ರ ಮೋದಿ ಹಾಗೂ ಮತ್ತೊಂದೆಡೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ರ್ಯಾಲಿಗಳು ನಡೆದಿದ್ದವು.<br /> <br /> ಚುನಾವಣೆಗೆ ಮುನ್ನವೇ ಭ್ರಷ್ಟಾಚಾರ ಆರೋಪಗಳು ಸುಳಿಗೆ ಸಿಲುಕಿದ್ದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವೇಳೆಯೂ ಯಡವಟ್ಟು ಮಾಡಿಕೊಂಡಿತ್ತು. ಭಂವರಿ ದೇವಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಇಬ್ಬರು ರಾಜಕಾರಣಿಗಳ ಬಂಧುಗಳಿಗೆ ಟಿಕೆಟ್ ನೀಡಿ ಪಕ್ಷದೊಳಗಿನಿಂದಲೇ ಸಾಕಷ್ಟು ಟೀಕೆಗೆ ಒಳಗಾಗಿತ್ತು.<br /> <br /> <strong>ಗಾಂಧಿ ಕುಟುಂಬದ ವೈಫಲ್ಯ ಎತ್ತಿ ಹಿಡಿದ ಫಲಿತಾಂಶ</strong><br /> <span style="font-size: 26px;"><strong>ಮುಂಬೈ (ಪಿಟಿಐ):</strong> ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಮೋಘ ಸಾಧನೆಯನ್ನು ಹೊಗಳಿರುವ ಮಿತ್ರ ಪಕ್ಷ ಶಿವಸೇನೆ, ಈ ಫಲಿತಾಂಶ ಕಾಂಗ್ರೆಸ್ ವಿರುದ್ಧ ಜನ ಮುನಿಸಿಕೊಂಡಿರುವುದನ್ನು ತೋರಿಸಿದೆ ಎಂದು ಹೇಳಿದೆ.</span></p>.<p>ಫಲಿತಾಂಶ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಸಂಜಯ್ ರಾವತ್, ‘ಚುನಾವಣಾ ಫಲಿತಾಂಶ ಬಿಜೆಪಿಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಾಲ್ಕು ರಾಜ್ಯಗಳ ಪೈಕಿ, ಮೂರರಲ್ಲಿ ಮುಗ್ಗರಿಸಿರುವ ಕಾಂಗ್ರೆಸ್, ಗಾಂಧಿ ಕುಟುಂಬದ ವೈಫಲ್ಯವನ್ನು ಎತ್ತಿ ತೋರಿಸಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ ಜೈಪುರ:</strong> ರಾಜಸ್ತಾನದಲ್ಲಿ ಬಿಜೆಪಿ ಚುನಾವಣಾ ಹೋರಾಟವನ್ನು ಮುನ್ನಡೆಸಿದ್ದ ವಸುಂಧರಾ ರಾಜೆ ಸಿಂಧಿಯಾ, ತಮ್ಮ ಪಕ್ಷದ ಭರ್ಜರಿ ಗೆಲುವಿಗೆ ನರೇಂದ್ರ ಮೋದಿ ಅವರ ವರ್ಚಸ್ಸೇ ಕಾರಣ ಎಂದಿದ್ದಾರೆ.<br /> <br /> ‘ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಇಲ್ಲಿನ ಚುನಾವಣೆ ಮೇಲೆ ಬಹುದೊಡ್ಡ ಪ್ರಭಾವ ಬೀರಿದರು. ಗುಜರಾತ್ ಮುಖ್ಯಮಂತ್ರಿಯಾಗಿ ಅವರೇನು ಮಾಡಿದ್ದಾರೆ ಎಂಬುದನ್ನು ಜನತೆ ಗಮನಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಅಂತಿಮ ಪೈಪೋಟಿಗೆ ಮುಂಚಿನ ಸೆಮಿಫೈನಲ್ ಇದಾಗಿದೆ. ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆಂಬುದಕ್ಕೆ ಇವತ್ತಿನ ಫಲಿತಾಂಶ ಶುಭಸೂಚನೆಯಾಗಿದೆ’ ಎಂದು ಎರಡನೇ ಬಾರಿಗೆ ರಾಜಸ್ತಾನದ ಮುಖ್ಯಮಂತ್ರಿ ಆಗುವ ಹೊಸ್ತಿಲಲ್ಲಿರುವ ವಸುಂಧರಾ ಅಭಿಪ್ರಾಯಪಟ್ಟರು.<br /> <br /> <strong>ಬಿಜೆಪಿ ಅಪಪ್ರಚಾರ: ಗೆಹ್ಲೋಟ್</strong><br /> ನಿರ್ಗಮಿತ ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಮಾತನಾಡಿ, ಬಿಜೆಪಿ ನಡೆಸಿದ ಅಪಪ್ರಚಾರವೇ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಎಂದಿದ್ದಾರೆ.<br /> <br /> ‘ನಮ್ಮ ಸೋಲಿಗೆ ಕಾರಣವೇ ಇರಲಿಲ್ಲ. ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಪ್ರಚಾರ ನಡೆಸಿದ್ದೆವು. ಆದರೆ ಜನರನ್ನು ತಲುಪಲು ನಾವು ವಿಫಲವಾದೆವು’ ಎಂದು ಗೆಹ್ಲಾಟ್ ಹೇಳಿದ್ದಾರೆ.<br /> <br /> ‘ರಾಜಸ್ತಾನದಲ್ಲಿ ಸರ್ಕಾರದ ವಿರೋಧಿ ಅಲೆ ಗುಪ್ತಗಾಮಿನಿಯಂತೆ ವರ್ತಿಸಿದೆ. ಇಂತಹ ಗುಪ್ತಗಾಮಿನಿ ಶಕ್ತಿ ಇದ್ದಾಗ ಯಾರೂ ಏನನ್ನೂ ಮಾಡಲಾಗದು. ಸರ್ಕಾರ ಆಡಳಿತದಲ್ಲಿದ್ದಾಗ ಜನಪರ ಯೋಜನೆಗಳನ್ನೇ ಜಾರಿಗೊಳಿಸಿದೆ. ಆದರೆ ನಾವು ಹಮ್ಮಿಕೊಂಡ ಯೋಜನೆಗಳನ್ನು ಚುನಾವಣಾ ವಿಷಯಗಳನ್ನಾಗಿ ಮಾಡಲು ಪಕ್ಷ ವಿಫಲವಾಯಿತು’ ಎಂದು ಅವರು ವಿಶ್ಲೇಷಿಸಿದ್ದಾರೆ.<br /> <br /> ವಸುಂಧರಾ ರಾಜೆ ಅವರು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೋರಿದ್ದರು. ಹೀಗಾಗಿ ಬಿಜೆಪಿ ಗೆಲುವಿಗೆ ವಸುಂಧರಾ ಕಾರಣವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> <br /> ರಾಜಸ್ತಾನದಲ್ಲಿ ಎರಡೂ ಪಕ್ಷಗಳ ಉನ್ನತ ನಾಯಕರು ಭರಾಟೆಯ ಪ್ರಚಾರ ನಡೆಸಿದ್ದರು. ಒಂದೆಡೆ ನರೇಂದ್ರ ಮೋದಿ ಹಾಗೂ ಮತ್ತೊಂದೆಡೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ರ್ಯಾಲಿಗಳು ನಡೆದಿದ್ದವು.<br /> <br /> ಚುನಾವಣೆಗೆ ಮುನ್ನವೇ ಭ್ರಷ್ಟಾಚಾರ ಆರೋಪಗಳು ಸುಳಿಗೆ ಸಿಲುಕಿದ್ದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವೇಳೆಯೂ ಯಡವಟ್ಟು ಮಾಡಿಕೊಂಡಿತ್ತು. ಭಂವರಿ ದೇವಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಇಬ್ಬರು ರಾಜಕಾರಣಿಗಳ ಬಂಧುಗಳಿಗೆ ಟಿಕೆಟ್ ನೀಡಿ ಪಕ್ಷದೊಳಗಿನಿಂದಲೇ ಸಾಕಷ್ಟು ಟೀಕೆಗೆ ಒಳಗಾಗಿತ್ತು.<br /> <br /> <strong>ಗಾಂಧಿ ಕುಟುಂಬದ ವೈಫಲ್ಯ ಎತ್ತಿ ಹಿಡಿದ ಫಲಿತಾಂಶ</strong><br /> <span style="font-size: 26px;"><strong>ಮುಂಬೈ (ಪಿಟಿಐ):</strong> ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಮೋಘ ಸಾಧನೆಯನ್ನು ಹೊಗಳಿರುವ ಮಿತ್ರ ಪಕ್ಷ ಶಿವಸೇನೆ, ಈ ಫಲಿತಾಂಶ ಕಾಂಗ್ರೆಸ್ ವಿರುದ್ಧ ಜನ ಮುನಿಸಿಕೊಂಡಿರುವುದನ್ನು ತೋರಿಸಿದೆ ಎಂದು ಹೇಳಿದೆ.</span></p>.<p>ಫಲಿತಾಂಶ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಸಂಜಯ್ ರಾವತ್, ‘ಚುನಾವಣಾ ಫಲಿತಾಂಶ ಬಿಜೆಪಿಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಾಲ್ಕು ರಾಜ್ಯಗಳ ಪೈಕಿ, ಮೂರರಲ್ಲಿ ಮುಗ್ಗರಿಸಿರುವ ಕಾಂಗ್ರೆಸ್, ಗಾಂಧಿ ಕುಟುಂಬದ ವೈಫಲ್ಯವನ್ನು ಎತ್ತಿ ತೋರಿಸಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>