ಅಮೇಠಿ (ಪಿಟಿಐ): ರಾಜೀವ್ ಗಾಂಧಿ ಹಂತಕರನ್ನು ತಮಿಳುನಾಡು ಸರ್ಕಾರ ಬಿಡುಗಡೆಗೊಳಿಸಲಿದೆ ಎಂಬುದು ನನಗೆ ನೋವು ಉಂಟು ಮಾಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜೀವ್ ಹತ್ಯೆಯಾದಾಗ ರಾಹುಲ್ ಅವರಿಗೆ 21 ವರ್ಷ ವಯಸ್ಸಾಗಿತ್ತು. ‘ಜನರ ಹಕ್ಕುಗಳಿಗಾಗಿ ಕೆಲಸ ಮಾಡಿದ ತಂದೆಯ ಹಂತಕರು ಬಿಡುಗಡೆಯಾಗುತ್ತಿರುವುದರಿಂದ ಬೇಸರವಾಗಿದೆ. ಈ ದೇಶದಲ್ಲಿ ಪ್ರಧಾನ ಮಂತ್ರಿಗೇ ನ್ಯಾಯ ದೊರಕುವುದಿಲ್ಲ ಎಂಬುದು ನನ್ನ ಹೃದಯದ ಮಾತು’ ಎಂದು ಜಗದೀಶ್ಪುರ ಸಮೀಪದ ಪುರಬ್ ಗ್ರಾಮದಲ್ಲಿ ಮಾತನಾಡುತ್ತಾ ರಾಹುಲ್ ಹೇಳಿದರು.