ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿಯಂತ್ರಣ ತರಬೇತಿಗೆ ನಿರಾಸಕ್ತಿ

ವಿಪತ್ತು ನಿಯಂತ್ರಣಾ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಸಮಾಧಾನ
Last Updated 24 ಫೆಬ್ರುವರಿ 2015, 9:10 IST
ಅಕ್ಷರ ಗಾತ್ರ

ರಾಮನಗರ: ವಿಪತ್ತು ನಿಯಂತ್ರಿಸುವ ಕುರಿತು ನೀಡ­ಲಾಗುತ್ತಿರುವ ತರಬೇತಿ­ಯನ್ನು ಪಡೆಯಲು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಆಸಕ್ತಿ ತೋರು­ತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾ­ಧಿಕಾರಿ ಎ.ಬಿ. ಬಸವರಾಜು ಅಸ­ಮಾಧಾನ ವ್ಯಕ್ತಪಡಿ­ಸಿದರು.

ನಗರದ ಮಿನಿ ವಿಧಾನಸೌದ ಆವ­ರಣದಲ್ಲಿ ಜಿಲ್ಲಾ ಗೃಹ ರಕ್ಷಕ ದಳ ಸೋಮವಾರ ಹಮ್ಮಿ­ಕೊಂಡಿದ್ದ ರಾಷ್ಟ್ರೀಯ ವಿಪತ್ತು ನಿಯಂತ್ರಣಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಮ್ಮ ಕಚೇರಿಯಲ್ಲಿ ಹೆಚ್ಚು ಕೆಲ­ಸವಿದೆ. ಸಭೆ, ಸಮಾರಂಭಗಳಿಗೆ ಹೋಗ­­ಬೇಕು. ಕ್ಷೇತ್ರ ಕಾರ್ಯಕ್ಕೆ ಹೋಗಬೇಕು. ಕೋರ್ಟ್‌ ಪ್ರಕರಣಗಳಿಗೆ ತೆರಳ­ಬೇಕು ಎಂಬ ಕಾರಣಗಳನ್ನು ನೀಡುವ ಮೂಲಕ ಅಧಿಕಾರಿಗಳು ತರ­ಬೇತಿಗೆ ಹಾಜರಾಗು­ತ್ತಿಲ್ಲ’ ಎಂದು ಅವರು ದೂರಿದರು.

ಆಕಸ್ಮಿಕವಾಗಿ ಎದುರಾಗು ವಿಪತ್ತು­ಗಳ ಸಮ­ರ್ಥವಾಗಿ ಎದುರಿಸಲು ನಾಗ­ರಿಕರು ಸಹ ಸನ್ನದ­ರಾಗಿರಬೇಕು. ವಿಪ­ತ್ತು­ಗಳು ನೈಸರ್ಗಿಕವಾ­ಗಿರಲಿ, ಮಾನವ ನಿರ್ಮಿತವಾಗಿರಲಿ ಅವುಗಳ ಪರಿಣಾಮ ನೇರವಾಗಿ ಜನ ಸಮುದಾಯ ಮತ್ತು ಪರಿಸರದ ಮೇಲೆ ಆಗುತ್ತವೆ. ಹೀಗಾಗಿ ನಾಗರಿಕ ಸಮಾಜ ಸರ್ಕಾರದೊಂದಿಗೆ ಕೈಜೋಡಿಸಿ ಮುಂಜಾಗೃತಾ ಕ್ರಮ­ಗಳನ್ನು ತೆಗೆದು­ಕೊಳ್ಳಬೇಕು ಎಂದರು.
ಸದಾ ಮುಂಜಾಗ್ರತಾ ಕ್ರಮಗಳು ಜಾರಿಯ­ಲ್ಲಿದ್ದರೆ ವಿಪತ್ತಿನ ಪರಿಣಾ­ಮವನ್ನು ಕಡಿಮೆಗೊಳಿಸ­ಬಹುದು ಎಂದು ಹೇಳಿದರು.

ನಗರದ ಸರ್ಕಲ್‌ ಇನ್‌ಸ್ಪೆಕ್ಟರ್‌ ಸುಬ್ರ­ಹ್ಮಣ್ಯ ಮಾತನಾಡಿ, ವಿಪತ್ತುಗ­ಳನ್ನು ಎದು­ರಿಸುವ ಮತ್ತು ಕಡಿಮೆ­ಗೊಳಿಸುವ ಕುರಿತು ಸಾರ್ವತ್ರಿಕ ಅರಿವು ಮೂಡಿ­ಸಬೇಕಿದೆ. ವಿಪತ್ತುಗಳು ಎದು­ರಾದ ಸನ್ನಿವೇಶದಲ್ಲಿ ಜನ ಸಮು­ದಾಯದ ಹೊಣೆಗಾರಿಕೆ ಮತ್ತು ಜವಾ­ಬ್ದಾರಿಗಳ ಬಗ್ಗೆ ಅವರಲ್ಲಿ ತಿಳಿ ಹೇಳುವ ಕಾರ್ಯವೂ ಹೆಚ್ಚಾಗಿ ನಡೆಯಬೇಕಿದೆ ಎಂದು ತಿಳಿಸಿದರು.

ಗೃಹ ರಕ್ಷಕ ದಳದ ಜಿಲ್ಲಾ ಸಮಾ­ದೇಷ್ಠಿ ಕೆ.ಕೆಂಪಯ್ಯ ಮಾತನಾಡಿ, ವಿಪತ್ತು­ಗಳ ಸಂದರ್ಭದಲ್ಲಿ ಜನರು ಆತಂಕಕ್ಕೆ ಒಳಗಾಗ­ಬಾರದು. ಪರಿಸ್ಥಿತಿ ಬಿಗಡಾಯಿ­ಸದಂತೆ ಕ್ರಮಗಳನ್ನು ಕೈಗೊಂಡು ಪೊಲೀಸ್ ಮತ್ತು ಅಗ್ನಿಶಾ­ಮಕ ದಳದ­ವರಿಗೆ ಮಾಹಿತಿ ನೀಡಬೇಕು. ವಿಪತ್ತು ಸಂಭವಿಸುವ ಮುನ್ನ ಹಾಗೂ ಆ ನಂತರದ ಪರಿಸ್ಥಿತಿಗಳನ್ನು ಎದುರಿ­ಸಲು ಕ್ರಿಯಾ ಯೋಜನೆ, ಸುಧಾರಣೆ ಮತ್ತು ತಾತ್ಕಾಲಿಕ ಪರಿಹಾರ ಸಿದ್ಧಪಡಿ­ಸಿಟ್ಟು­ಕೊಳ್ಳಬೇಕು ಎಂದರು. ಜಿಲ್ಲೆ­ಯಲ್ಲಿ ಅನಾಹುತಗಳು ಸಂಭವಿಸಿದಾಗ ದೂ. ಸಂ: 080-–27272265 ಸಂಪರ್ಕಿ­ಸಬಹುದು ಎಂದರು.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಸವಿತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ನಡೆಸಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ನೀಲ­ಕಂಠ­ಸ್ವಾಮಿ, ವಿಜಯ್‌ ಕುಮಾರ್, ವಾರ್ತಾ ಇಲಾ­ಖೆಯ ಸಹಾಯಕ ನಿರ್ದೇ­ಶಕ ಹಮೀ­ದ್‌ಖಾನ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಗುರುಲಿಂಗಯ್ಯ, ಸಹಾಯಕ ಅಗ್ನಿಶಾ­ಮಕ ಸಹಾಯಕ ಅಧಿಕಾರಿ ರಾಜೇಂದ್ರ­ಸಿಂಗ್ ಮತ್ತಿರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT