ಪ್ರತಿವರ್ಷ ಬೇಸಿಗೆ ಬಂತೆಂದರೆ ನೀರಿನ ವಿಪರೀತ ಅಭಾವ ಸ್ಥಿತಿ ಎದುರಾಗುತ್ತದೆ. ಇದನ್ನು ಮುಂಬರುವ ವರ್ಷಗಳಲ್ಲಿ ಕಡಿಮೆ ಮಾಡಲು ಇರುವ ಉಪಾಯವೆಂದರೆ ಹೂಳು ತೆಗೆಯುವುದು.
ಬೇಸಿಗೆಯಲ್ಲಿ ಕೆರೆ, ಹಳ್ಳ, ನದಿ, ಜಲಾಶಯಗಳು ಬತ್ತಿ ಹೋಗುತ್ತವೆ. ಕನಿಷ್ಠ 2–3 ತಿಂಗಳ ಮಟ್ಟಿಗಾದರೂ ನೀರಿರುವುದಿಲ್ಲ. ಇಂತಹ ಸಮಯದಲ್ಲಿ ಕೆರೆ, ಜಲಾಶಯಗಳ ಹೂಳು ತೆಗೆಯಬೇಕು.
ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುತ್ತದೆ. ಕಾರ್ಮಿಕರಿಗೆ ಕೂಲಿ ಕೆಲಸ ಸಿಗುತ್ತದೆ. ಗುಳೆ ಹೋಗುವುದೂ ತಪ್ಪುತ್ತದೆ. ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಿ ಬಾವಿ, ಕೊಳವೆಬಾವಿಗಳಲ್ಲಿ ಕೂಡ ನೀರು ಸಿಗುತ್ತದೆ. ಆದ್ದರಿಂದ ಹೂಳು ತೆಗೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿ.