<p><strong>ಮಹದೇವಪುರ:</strong> ‘ಬೆಂಗಳೂರು ಹೊರ-ವಲಯದ ದೇವನಹಳ್ಳಿಯಲ್ಲಿ ಒಟ್ಟು 10,500 ಎಕರೆ ಭೂಪ್ರದೇಶದಲ್ಲಿ ದೇಶದಲ್ಲಿಯೇ ಅತೀ ದೊಡ್ಡ ಐಟಿ ಹಬ್ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು<br /> <br /> ಮೊದಲ ಹಂತದಲ್ಲಿ ಈಗಾಗಲೇ 2,073 ಎಕರೆ ಭೂಮಿಯನ್ನು ಸ್ವಾಧೀನ--ಗೊಳಿಸುವ ಕಾರ್ಯ ನಡೆದಿದೆ. ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸು-ವಂತೆ ಕೆಐಎಡಿಬಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.<br /> <br /> ಇಲ್ಲಿನ ವೈಟ್ಫೀಲ್ಡ್ನಲ್ಲಿರುವ ಪ್ರಮುಖ ಸಲಹೆ, ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಕ್ಯಾಪ್ಜೆಮಿನಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. <br /> <br /> ‘ದೇಶದಲ್ಲಿ ಐಟಿ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಐಟಿ ಕಂಪೆನಿಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗದೇ, ಮೈಸೂರು, ಬೆಳ-ಗಾವಿ, ತುಮಕೂರು ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಗೂ ವಿಸ್ತರಣೆಗೊಳ್ಳ-ಬೇಕು. ಅಂತಹ ವಿಸ್ತರಣೆ ಮತ್ತು ಬೆಳವಣಿಗೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಅವರು ಭರವಸೆ ನೀಡಿದರು.<br /> <br /> ಸಚಿವ ಎಸ್.ಆರ್. ಪಾಟೀಲ್ ಮಾತ-ನಾಡಿ, ‘ದೇಶದಲ್ಲಿನ ಐಟಿಬಿಟಿ ಕ್ಷೇತ್ರದಲ್ಲಿ ಈಗಾಗಲೇ 40 ಲಕ್ಷ ಉದ್ಯೋ-ಗಿ-ಗಳಿದ್ದಾರೆ. ಮುಂದಿನ 2020ರ ವೇಳೆಗೆ 80 ಲಕ್ಷದಷ್ಟು ಉದ್ಯೋಗಿಗಳು ಐಟಿಬಿಟಿ ಕ್ಷೇತ್ರದಲ್ಲಿರು-ತ್ತಾರೆ. ಅಂತಹ ಬೆಳವಣಿಗೆಯ ಹಂತ-ವನ್ನು ನಾವು ಬೆಂಗಳೂರು ನಗರದಲ್ಲಿ ಕಾಣುತ್ತಿದ್ದೇವೆ’ ಎಂದು ಹೇಳಿದರು.<br /> <br /> ಕ್ಯಾಪ್ಜೆಮಿನಿ ಇಂಡಿಯಾದ ಸಿಇಒ ಅರುಣಾ ಜಯಂತಿ ಮಾತನಾಡಿ, ‘ಕ್ಯಾಪ್ಜೆಮಿನಿ ಕಂಪೆನಿ ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ 1.4ಕ್ಕೂ ಹೆಚ್ಚು ಕಾರ್ಮಿಕರೊಂದಿಗೆ ಸಲಹೆ, ತಂತ್ರಜ್ಞಾನ ಹಾಗೂ ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತಿರುವ ಪ್ರಮುಖ ಕಂಪನಿಯಾಗಿದೆ’ ಎಂದು ತಿಳಿಸಿದರು.<br /> <br /> ‘ಬೆಂಗಳೂರು ನಗರ ನಮ್ಮ ಸಂಸ್ಥೆಯು ಬೆಳೆಯುತ್ತಿರುವ ಕೇಂದ್ರಗಳ ಪೈಕಿ ಒಂದಾ-ಗಿದ್ದು, ವಿವಿಧೆಡೆಗಳಲ್ಲಿ ಹರಡಿರುವ ನಮ್ಮ ನಾಲ್ಕು ಮುಖ್ಯ ಕಚೇರಿಗಳಲ್ಲಿ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಳಿದ್ದಾರೆ ಎಂದರು.<br /> <br /> ಐಟಿ ವಲಯದ ಅತೀ ದೊಡ್ಡ ಕೇಂದ್ರ-ಸ್ಥಾನವೆನಿಸಿರುವ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಭಾನ್ವಿತ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕಾರ್ಯತಾಂತ್ರಿಕ ಪ್ರದೇಶಗಳಲ್ಲಿ ಕ್ಯಾಪ್ಜೆಮಿನಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತ ಮುನ್ನಡೆಯುತ್ತಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇವಪುರ:</strong> ‘ಬೆಂಗಳೂರು ಹೊರ-ವಲಯದ ದೇವನಹಳ್ಳಿಯಲ್ಲಿ ಒಟ್ಟು 10,500 ಎಕರೆ ಭೂಪ್ರದೇಶದಲ್ಲಿ ದೇಶದಲ್ಲಿಯೇ ಅತೀ ದೊಡ್ಡ ಐಟಿ ಹಬ್ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು<br /> <br /> ಮೊದಲ ಹಂತದಲ್ಲಿ ಈಗಾಗಲೇ 2,073 ಎಕರೆ ಭೂಮಿಯನ್ನು ಸ್ವಾಧೀನ--ಗೊಳಿಸುವ ಕಾರ್ಯ ನಡೆದಿದೆ. ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸು-ವಂತೆ ಕೆಐಎಡಿಬಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.<br /> <br /> ಇಲ್ಲಿನ ವೈಟ್ಫೀಲ್ಡ್ನಲ್ಲಿರುವ ಪ್ರಮುಖ ಸಲಹೆ, ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಕ್ಯಾಪ್ಜೆಮಿನಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. <br /> <br /> ‘ದೇಶದಲ್ಲಿ ಐಟಿ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಐಟಿ ಕಂಪೆನಿಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗದೇ, ಮೈಸೂರು, ಬೆಳ-ಗಾವಿ, ತುಮಕೂರು ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಗೂ ವಿಸ್ತರಣೆಗೊಳ್ಳ-ಬೇಕು. ಅಂತಹ ವಿಸ್ತರಣೆ ಮತ್ತು ಬೆಳವಣಿಗೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಅವರು ಭರವಸೆ ನೀಡಿದರು.<br /> <br /> ಸಚಿವ ಎಸ್.ಆರ್. ಪಾಟೀಲ್ ಮಾತ-ನಾಡಿ, ‘ದೇಶದಲ್ಲಿನ ಐಟಿಬಿಟಿ ಕ್ಷೇತ್ರದಲ್ಲಿ ಈಗಾಗಲೇ 40 ಲಕ್ಷ ಉದ್ಯೋ-ಗಿ-ಗಳಿದ್ದಾರೆ. ಮುಂದಿನ 2020ರ ವೇಳೆಗೆ 80 ಲಕ್ಷದಷ್ಟು ಉದ್ಯೋಗಿಗಳು ಐಟಿಬಿಟಿ ಕ್ಷೇತ್ರದಲ್ಲಿರು-ತ್ತಾರೆ. ಅಂತಹ ಬೆಳವಣಿಗೆಯ ಹಂತ-ವನ್ನು ನಾವು ಬೆಂಗಳೂರು ನಗರದಲ್ಲಿ ಕಾಣುತ್ತಿದ್ದೇವೆ’ ಎಂದು ಹೇಳಿದರು.<br /> <br /> ಕ್ಯಾಪ್ಜೆಮಿನಿ ಇಂಡಿಯಾದ ಸಿಇಒ ಅರುಣಾ ಜಯಂತಿ ಮಾತನಾಡಿ, ‘ಕ್ಯಾಪ್ಜೆಮಿನಿ ಕಂಪೆನಿ ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ 1.4ಕ್ಕೂ ಹೆಚ್ಚು ಕಾರ್ಮಿಕರೊಂದಿಗೆ ಸಲಹೆ, ತಂತ್ರಜ್ಞಾನ ಹಾಗೂ ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತಿರುವ ಪ್ರಮುಖ ಕಂಪನಿಯಾಗಿದೆ’ ಎಂದು ತಿಳಿಸಿದರು.<br /> <br /> ‘ಬೆಂಗಳೂರು ನಗರ ನಮ್ಮ ಸಂಸ್ಥೆಯು ಬೆಳೆಯುತ್ತಿರುವ ಕೇಂದ್ರಗಳ ಪೈಕಿ ಒಂದಾ-ಗಿದ್ದು, ವಿವಿಧೆಡೆಗಳಲ್ಲಿ ಹರಡಿರುವ ನಮ್ಮ ನಾಲ್ಕು ಮುಖ್ಯ ಕಚೇರಿಗಳಲ್ಲಿ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಳಿದ್ದಾರೆ ಎಂದರು.<br /> <br /> ಐಟಿ ವಲಯದ ಅತೀ ದೊಡ್ಡ ಕೇಂದ್ರ-ಸ್ಥಾನವೆನಿಸಿರುವ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಭಾನ್ವಿತ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕಾರ್ಯತಾಂತ್ರಿಕ ಪ್ರದೇಶಗಳಲ್ಲಿ ಕ್ಯಾಪ್ಜೆಮಿನಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತ ಮುನ್ನಡೆಯುತ್ತಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>