ಬೆಂಗಳೂರು: ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ (79) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
1969ರಲ್ಲಿ ‘ಮೇಯರ್ ಮುತ್ತಣ್ಣ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪರಿಚಿತರಾದ ಸಿದ್ದಲಿಂಗಯ್ಯ ಅವರು ‘ಬಾಳು ಬೆಳಗಿತು’, ‘ನಮ್ಮ ಸಂಸಾರ’, ‘ತಾಯಿ ದೇವರು’, ‘ನ್ಯಾಯವೇ ದೇವರು’, ‘ಬಂಗಾರದ ಮನುಷ್ಯ’ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದರು.
ಡಾ.ರಾಜ್ ಕುಮಾರ್ ಅವರು ನಟಿಸಿದ್ದ ಸಿದ್ದಲಿಂಗಯ್ಯ ಅವರ ನಿರ್ದೇಶನದ ‘ಬಂಗಾರದ ಮನುಷ್ಯ’ ಚಿತ್ರ ಅಪೂರ್ವ ಯಶಸ್ಸನ್ನು ಕಂಡಿತ್ತು.