<p><strong>ಮೈಸೂರು:</strong> ಸ್ಥಳನಾಮಗಳ ಅಧ್ಯಯನ ವೊಂದರಿಂದಲೇ ‘ರಿಯಲ್ ಟಿಪ್ಪು’ ಏನೆಂದು ಗೊತ್ತಾಗುತ್ತದೆ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು.<br /> ಇಲ್ಲಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ.ಕೆ.ಪಿ. ಲಲಿತಾ (ರಶ್ಮಿ ನಂಜಪ್ಪ) ಅವರ ಮೂರು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ಟಿಪ್ಪುವಿನ ನಿಜಸ್ವರೂಪ ಅರಿಯಲು ಯಾವುದೋ ಉನ್ನತಮಟ್ಟದ ಸಂಶೋಧನೆ ಬೇಕಿಲ್ಲ. ರಾಜ್ಯದ ಸ್ಥಳನಾಮಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರೆ ಆತನ ನಿಜಸ್ವರೂಪ ತಿಳಿಯುತ್ತದೆ ಎಂದು ಅವರು ವಿಶ್ಲೇಷಿಸಿದರು.<br /> <br /> ಸಾಹಿತಿಗಳು ಸಾಹಿತ್ಯ ಬರೆಯುವು ದನ್ನು ಬಿಟ್ಟು ತಮಗೆ ಗೊತ್ತಿಲ್ಲದ ವಿಚಾರ ಮಾತನಾಡುವುದರಿಂದಲೇ ಟಿಪ್ಪು ಪರಮತ ಸಹಿಷ್ಣು ಎಂಬ ಭಾವನೆ ಬರುವಂತಾಗಿದೆ. ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡಿದರೆ ಆತ ಬಹಳಷ್ಟು ಊರುಗಳ ಹೆಸರುಗಳನ್ನು ಬದಲಿಸಿದ ವಿವರ ಗೊತ್ತಾಗುತ್ತದೆ ಎಂದು ಅವರು ವಿವರಿಸಿದರು.<br /> <br /> ಮೈಸೂರಿಗೆ ನಜರ್ಬಾದ್, ಬ್ರಹ್ಮಪುರಿಗೆ ಸುಲ್ತಾನ್ ಪೇಟೆ, ಕಾಳಿಕೋಟೆ (ಕಲ್ಲಿಕೋಟೆ)ಗೆ ಫರೂಕಬಾದ್, ದೇವನಹಳ್ಳಿಗೆ ಯೂಸೂಫಬಾದ್ ಎಂದು ಹಲವು ಸ್ಥಳಗಳ ಹೆಸರುಗಳನ್ನು ಬದಲಿಸಿದ. ಅದೃಷ್ಟವಶಾತ್ ಆತನ ನಂತರ ರಾಜವಂಶಸ್ಥರಿಗೆ ಮರಳಿ ಮೈಸೂರು ರಾಜ್ಯದ ಅಧಿಕಾರ ಸಿಕ್ಕಿತು. ಹಾಗಾಗಿ, ಮೂಲಹೆಸರುಗಳನ್ನು ಅವರು ಉಳಿಸಿಕೊಂಡರು ಎಂದು ತಿಳಿಸಿದರು.<br /> <br /> ದೇಸಿ ಹೆಸರುಗಳ ಕುರಿತು ಕೀಳರಿಮೆ ಸಲ್ಲ: ‘ನಗರದ ಪಡುವಾರಹಳ್ಳಿಗೆ ವಿನಾಯಕನಗರ ಹಾಗೂ ಕನ್ನೇಗೌಡನ ಕೊಪ್ಪಲಿಗೆ ಕೆ.ಜಿ.ಕೊಪ್ಪಲು ಎಂದು ಕರೆಯುತ್ತಾರೆ. ನಮ್ಮ ದೇಸಿ ಹೆಸರುಗಳನ್ನು ಕುರಿತು ಕೀಳರಿಮೆ ಇರಬಾರದು. ಆ ಹೆಸರುಗಳನ್ನು ನಾವೇ ರಕ್ಷಿಸದೆ ಹೋದರೆ ಮತ್ತಾರು ರಕ್ಷಿಸುತ್ತಾರೆ’ ಎಂದು ಪ್ರಶ್ನಿಸಿದರು.<br /> <br /> ಬೆಂಗಳೂರಿನ ಅಶ್ವಥನಗರವನ್ನು ಮುಖ್ಯಮಂತ್ರಿಯೊಬ್ಬರು ಸಂಜಯನಗರ ಎಂದು ಬದಲಿಸಿದರು. ಏಕೆ ಬದಲಾಯಿಸಿದರು ಎಂದು ಅಧ್ಯಯನ ನಡೆಸಿದರೆ ಆ ಮುಖ್ಯಮಂತ್ರಿ ಇದರಿಂದ ಅವರು ಪಡೆದ ಲಾಭದ ಕುರಿತು ಗೊತ್ತಾಗುತ್ತದೆ. ಹೀಗೆ, ಈಗಿನ ಕಾಲದಲ್ಲೂ ಸ್ಥಳನಾಮಗಳನ್ನು ಬದಲಿಸುವ ಪ್ರವೃತ್ತಿ ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ರಾಮಾಯಣ, ಮಹಾಭಾರತಗಳು ಒಗ್ಗಟ್ಟಿಗೆ ಕಾರಣ: ಬ್ರಿಟಿಷರ ನೀತಿ, ಅವರು ಕಲ್ಪಿಸಿದ ರೈಲು ಸಂಪರ್ಕ, ದೇಶದ ಸಂವಿಧಾನಗಳು ಒಗ್ಗಟ್ಟಿಗೆ ಕಾರಣ ಎಂದು ಹಲವರು ಹೇಳುವುದರಲ್ಲಿ ಯಾವುದೇ ಹುರುಳಿಲ್ಲ. ಇವೆಲ್ಲಕ್ಕೂ ಸಾವಿರಾರು ವರ್ಷಗಳಷ್ಟು ಹಿಂದೆಯೇ ಭಾರತದಲ್ಲಿ ರಾಮಾಯಣ ಹಾಗೂ ಮಹಾಭಾರತಗಳು ಜನರನ್ನು ಒಂದುಗೂಡಿಸಿದ್ದವು.<br /> <br /> ದೇಶದ ಯಾವುದೇ ಊರಿಗೆ ಹೋದರೂ ಅಲ್ಲಿ ಈ ಮಹಾಕಾವ್ಯಗಳನ್ನು ಸಂಪರ್ಕಿಸುವ ಒಂದೊಂದು ಹೆಸರುಗಳು, ಸ್ಥಳನಾಮಗಳು, ಕಥೆಗಳು ದೊರಕುತ್ತವೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸ್ಥಳನಾಮಗಳ ಅಧ್ಯಯನ ವೊಂದರಿಂದಲೇ ‘ರಿಯಲ್ ಟಿಪ್ಪು’ ಏನೆಂದು ಗೊತ್ತಾಗುತ್ತದೆ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು.<br /> ಇಲ್ಲಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ.ಕೆ.ಪಿ. ಲಲಿತಾ (ರಶ್ಮಿ ನಂಜಪ್ಪ) ಅವರ ಮೂರು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ಟಿಪ್ಪುವಿನ ನಿಜಸ್ವರೂಪ ಅರಿಯಲು ಯಾವುದೋ ಉನ್ನತಮಟ್ಟದ ಸಂಶೋಧನೆ ಬೇಕಿಲ್ಲ. ರಾಜ್ಯದ ಸ್ಥಳನಾಮಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರೆ ಆತನ ನಿಜಸ್ವರೂಪ ತಿಳಿಯುತ್ತದೆ ಎಂದು ಅವರು ವಿಶ್ಲೇಷಿಸಿದರು.<br /> <br /> ಸಾಹಿತಿಗಳು ಸಾಹಿತ್ಯ ಬರೆಯುವು ದನ್ನು ಬಿಟ್ಟು ತಮಗೆ ಗೊತ್ತಿಲ್ಲದ ವಿಚಾರ ಮಾತನಾಡುವುದರಿಂದಲೇ ಟಿಪ್ಪು ಪರಮತ ಸಹಿಷ್ಣು ಎಂಬ ಭಾವನೆ ಬರುವಂತಾಗಿದೆ. ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡಿದರೆ ಆತ ಬಹಳಷ್ಟು ಊರುಗಳ ಹೆಸರುಗಳನ್ನು ಬದಲಿಸಿದ ವಿವರ ಗೊತ್ತಾಗುತ್ತದೆ ಎಂದು ಅವರು ವಿವರಿಸಿದರು.<br /> <br /> ಮೈಸೂರಿಗೆ ನಜರ್ಬಾದ್, ಬ್ರಹ್ಮಪುರಿಗೆ ಸುಲ್ತಾನ್ ಪೇಟೆ, ಕಾಳಿಕೋಟೆ (ಕಲ್ಲಿಕೋಟೆ)ಗೆ ಫರೂಕಬಾದ್, ದೇವನಹಳ್ಳಿಗೆ ಯೂಸೂಫಬಾದ್ ಎಂದು ಹಲವು ಸ್ಥಳಗಳ ಹೆಸರುಗಳನ್ನು ಬದಲಿಸಿದ. ಅದೃಷ್ಟವಶಾತ್ ಆತನ ನಂತರ ರಾಜವಂಶಸ್ಥರಿಗೆ ಮರಳಿ ಮೈಸೂರು ರಾಜ್ಯದ ಅಧಿಕಾರ ಸಿಕ್ಕಿತು. ಹಾಗಾಗಿ, ಮೂಲಹೆಸರುಗಳನ್ನು ಅವರು ಉಳಿಸಿಕೊಂಡರು ಎಂದು ತಿಳಿಸಿದರು.<br /> <br /> ದೇಸಿ ಹೆಸರುಗಳ ಕುರಿತು ಕೀಳರಿಮೆ ಸಲ್ಲ: ‘ನಗರದ ಪಡುವಾರಹಳ್ಳಿಗೆ ವಿನಾಯಕನಗರ ಹಾಗೂ ಕನ್ನೇಗೌಡನ ಕೊಪ್ಪಲಿಗೆ ಕೆ.ಜಿ.ಕೊಪ್ಪಲು ಎಂದು ಕರೆಯುತ್ತಾರೆ. ನಮ್ಮ ದೇಸಿ ಹೆಸರುಗಳನ್ನು ಕುರಿತು ಕೀಳರಿಮೆ ಇರಬಾರದು. ಆ ಹೆಸರುಗಳನ್ನು ನಾವೇ ರಕ್ಷಿಸದೆ ಹೋದರೆ ಮತ್ತಾರು ರಕ್ಷಿಸುತ್ತಾರೆ’ ಎಂದು ಪ್ರಶ್ನಿಸಿದರು.<br /> <br /> ಬೆಂಗಳೂರಿನ ಅಶ್ವಥನಗರವನ್ನು ಮುಖ್ಯಮಂತ್ರಿಯೊಬ್ಬರು ಸಂಜಯನಗರ ಎಂದು ಬದಲಿಸಿದರು. ಏಕೆ ಬದಲಾಯಿಸಿದರು ಎಂದು ಅಧ್ಯಯನ ನಡೆಸಿದರೆ ಆ ಮುಖ್ಯಮಂತ್ರಿ ಇದರಿಂದ ಅವರು ಪಡೆದ ಲಾಭದ ಕುರಿತು ಗೊತ್ತಾಗುತ್ತದೆ. ಹೀಗೆ, ಈಗಿನ ಕಾಲದಲ್ಲೂ ಸ್ಥಳನಾಮಗಳನ್ನು ಬದಲಿಸುವ ಪ್ರವೃತ್ತಿ ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ರಾಮಾಯಣ, ಮಹಾಭಾರತಗಳು ಒಗ್ಗಟ್ಟಿಗೆ ಕಾರಣ: ಬ್ರಿಟಿಷರ ನೀತಿ, ಅವರು ಕಲ್ಪಿಸಿದ ರೈಲು ಸಂಪರ್ಕ, ದೇಶದ ಸಂವಿಧಾನಗಳು ಒಗ್ಗಟ್ಟಿಗೆ ಕಾರಣ ಎಂದು ಹಲವರು ಹೇಳುವುದರಲ್ಲಿ ಯಾವುದೇ ಹುರುಳಿಲ್ಲ. ಇವೆಲ್ಲಕ್ಕೂ ಸಾವಿರಾರು ವರ್ಷಗಳಷ್ಟು ಹಿಂದೆಯೇ ಭಾರತದಲ್ಲಿ ರಾಮಾಯಣ ಹಾಗೂ ಮಹಾಭಾರತಗಳು ಜನರನ್ನು ಒಂದುಗೂಡಿಸಿದ್ದವು.<br /> <br /> ದೇಶದ ಯಾವುದೇ ಊರಿಗೆ ಹೋದರೂ ಅಲ್ಲಿ ಈ ಮಹಾಕಾವ್ಯಗಳನ್ನು ಸಂಪರ್ಕಿಸುವ ಒಂದೊಂದು ಹೆಸರುಗಳು, ಸ್ಥಳನಾಮಗಳು, ಕಥೆಗಳು ದೊರಕುತ್ತವೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>