ಬೆಂಗಳೂರು: ನಗರದ ಅ.ನ.ಕೃ. ಪ್ರತಿಷ್ಠಾನ ನೀಡುವ ಅ.ನ.ಕೃ–ನಿರ್ಮಾಣ್ ಸ್ವರ್ಣ ಪ್ರಶಸ್ತಿಗೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ.
ವಿ.ಲಕ್ಷ್ಮಿನಾರಾಯಣ್, ಪ್ರೊ.ಜಿ. ವೆಂಕಟಸುಬ್ಬಯ್ಯ, ಎ.ಕೆ. ಗೌತಮ್, ಬಿ.ಸಿ. ಗಣೇಶ್ ಅವರನ್ನು ಒಳಗೊಂಡ ತಜ್ಞರ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ಸ್ವರ್ಣಫಲಕ ಹಾಗೂ ₨1,00,001 ನಗದನ್ನು ಒಳಗೊಂಡಿದೆ.
ಶಶಿಕಲಾಗೆ ಅನುಪಮಾ ಪ್ರಶಸ್ತಿ: ಕರ್ನಾಟಕ ಲೇಖಕಿಯರ ಸಂಘ ನೀಡುವ 2015ರ ಸಾಲಿನ ‘ಅನುಪಮಾ ಪ್ರಶಸ್ತಿ’ಗೆ ಹಿರಿಯ ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₨10 ಸಾವಿರ ನಗದು ಒಳಗೊಂಡಿದೆ. ಮೇ 31ರಂದು ಕನ್ನಡಭವನದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು.