‘ಇದು ವಿಜ್ಞಾನದ ಬಾಗಿಲನ್ನು ಜನಸಾಮಾನ್ಯರಿಗೂ ತೆರೆಯುವ ಹೊತ್ತು’
ವಿಜ್ಞಾನದ ಹೆದ್ದಾರಿಯ ಪಥ ಬದಲಿಸಿದ ಇಂತಹ ಅನೇಕ ಮಹಾತಿರುವುಗಳನ್ನು ಕನ್ನಡದಲ್ಲಿ ಪರಿಚಯಿಸುವ ವಿಶಿಷ್ಟ ಕೃತಿಯೊಂದು ಇಂದು (ಸೆ. 3) ಬೆಳಿಗ್ಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ, ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಎಂಬ ಹೆಸರಿನ ಈ ಪುಸ್ತಕದ ಸಂಪಾದಕರು ಡಾ. ಟಿ. ಆರ್. ಅನಂತರಾಮು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆ ಮಾಡುತ್ತಿರುವ ಅನಂತರಾಮುರವರ ಸಾಧನೆಗಳ ಪಟ್ಟಿಗೆ ಈ ಕೃತಿ ಮತ್ತೊಂದು ಮಹತ್ವದ ಸೇರ್ಪಡೆ.Last Updated 2 ಸೆಪ್ಟೆಂಬರ್ 2017, 19:30 IST