ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಕಾಣದ ಹೆದ್ದಾರಿ: ಪರದಾಟ

ಶಿರಸಿ- ತೋರಣಗಲ್ಲು ರಸ್ತೆ ತುಂಬೆಲ್ಲ ಗುಂಡಿಗಳ ಕಾರುಬಾರು, ಹೊರಬಂದಿರುವ ಕಬ್ಬಿಣದ ಸರಳು
Last Updated 8 ನವೆಂಬರ್ 2016, 5:36 IST
ಅಕ್ಷರ ಗಾತ್ರ
ಕೊಟ್ಟೂರು: ಪಟ್ಟಣದ ಮೂಲಕ ಹಾದು ಹೋಗಿರುವ ಶಿರಸಿ- ತೋರಣಗಲ್ಲು ಹೆದ್ದಾರಿಯಲ್ಲಿ ಕಿತ್ತು ಹೋದ ಡಾಂಬರು, ದೊಡ್ಡ ದೊಡ್ಡ ಗುಂಡಿಗಳು, ಮೇಲೆದ್ದ ಕಬ್ಬಿಣ ರಾಡುಗಳಿಂದ ಜನರು ರೋಸಿಹೋಗಿದ್ದಾರೆ.
 
ಪಟ್ಟಣದಿಂದ 8 ಕಿ.ಮೀ. ದೂರದ ಮತ್ತಿಹಳ್ಳಿ ಕ್ರಾಸ್‌ನಿಂದ ಮಲ್ಲನಾಯಕ­ನಹಳ್ಳಿ ಕ್ರಾಸ್ ವರೆಗೂ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇಂತಹ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಒಂದು ಸಾಹಸ ಎಂಬಂತಾಗಿದೆ. ಪಟ್ಟಣದಿಂದ ಹರಪನಹಳ್ಳಿಗೆ ಹೋಗುವ ಮಾರ್ಗದಲ್ಲಿ 8 ಕಿ.ಮೀ. ಸಾಗಲು ಅರ್ಧ ಗಂಟೆಗೂ ಹೆಚ್ಚು ಕಾಲ ಹಿಡಿಯುತ್ತದೆ.
 
ಈ ರಸ್ತೆ ಹಾಳಾಗಿ ವರ್ಷಗಳೇ ಕಳೆದಿದ್ದರೂ ದುರಸ್ತಿ ಭಾಗ್ಯ ಕಾಣಲಿಲ್ಲ. ರಸ್ತೆಯುದ್ದಕ್ಕೂ ಡಾಂಬರು ಕಿತ್ತು ದೊಡ್ಡ ತಗ್ಗುಗಳು ಉಂಟಾಗಿವೆ. ಚಪ್ಪರದಹಳ್ಳಿ ಬಳಿಯ ರೈಲ್ವೆ ಮೇಲ್ಸೇತುವೆ ಅಡಿಯಲ್ಲಿ ರಸ್ತೆಗೆ ಹಾಕಿರುವ ಕಾಂಕ್ರೀಟ್ ಕಬ್ಬಿಣ ರಾಡುಗಳು ಕಿತ್ತು ಬಂದಿವೆ.
 
ಈ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ  ಕೂಡ್ಲಿಗಿ ತಾಲ್ಲೂಕಿನ 5 ಕಿ.ಮೀ. ದುರಸ್ತಿಗೆ ₹ 5 ಕೋಟಿ, ಹೂವಿನಹಡಗಲಿ ತಾಲ್ಲೂ­ಕಿಗೆ ₹ 18 ಕೋಟಿ ಮತ್ತು ಹಗರಿ­ಬೊಮ್ಮ­ನ­ಹಳ್ಳಿ ತಾಲ್ಲೂಕಿಗೆ ₹ 9 ಕೋಟಿಗಳು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಇಲಾ­ಖೆಯ ಯೋಜನೆ­ಯೊಂದರಲ್ಲಿ ಒಟ್ಟು ₹ 32 ಕೋಟಿ ಪ್ಯಾಕೇಜ್ ಹಣ ಮಂಜೂ­ರಾಗಿದೆ. ಇದರ ಕಾಮಗಾರಿ ಟೆಂಡರ್ ಅನ್ನು ಬಳ್ಳಾರಿಯ ಗುತ್ತಿಗೆ­ದಾ­ರರು ಪಡೆದಿದ್ದಾರೆ. ಕಾಮಗಾರಿ ಆರಂಭಿ­ಸಿಲು ಆದೇಶ ನೀಡಿ ತಿಂಗ­ಳಾ­ದರೂ ಗುತ್ತಿಗೆದಾರರು ಮಾತ್ರ ಕಾಮಗಾರಿ ಆರಂಭಿಸಲು ಮುಂದಾಗಿಲ್ಲ. 
 
‘ಕಾಮಗಾರಿ ಆರಂಭಿಸಲು ಎಸ್.­ಎಚ್.ಡಿ .ಪಿ ಅನಮೋದನೆ ನೀಡಿದ್ದಾರೆ. ಆದೇಶ ನೀಡಿದ ಅವಧಿಯೊಳಗೆ ಅವರು ಕಾಮಗಾರಿ ಆರಂಭಿಸದಿದ್ದರೆ ಇಲಾಖೆ ಮುಂದಿನ ಕ್ರಮ ಕೈಗೊಳ್ಳುತ್ತದೆ. ಎಸ್.­ಎಚ್ .ಡಿ .ಪಿ ಇಲಾಖೆಯ ಕಾಮ­ಗಾರಿ ಇದಾ­ಗಿರುವುದರಿಂದ ನಾವು ಇದರ ಮೇಲುಸ್ತವಾರಿಯನ್ನಷ್ಟೇ ನೋಡಿಕೊ­ಳ್ಳುತ್ತೇವೆ’ ಎಂದು ಲೋಕೋ­ಪಯೋಗಿ ಇಲಾ­ಖೆಯ ಸಹಾ­ಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಎಂ.ತಿಮ್ಮಪ್ಪ ಹೇಳುತ್ತಾರೆ.
 
ಕಾಮಗಾರಿ ಆರಂಭಿಸಲು ಅನು­ಮೋದನೆ ಸಿಕ್ಕಿದ್ದರೂ ಗುತ್ತಿಗೆ­ದಾರರು ಮಾಡುತ್ತಿರುವ ವಿಳಂಬಕ್ಕೆ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಹಾಳಾಗಿರುವ ರಸ್ತೆ ಕೂಡಲೇ ದುರಸ್ತಿಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ನಾಗರಿಕರ ಒತ್ತಾಯಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT