ವಾಸ್ತವದಲ್ಲಿ ಗಣಿಗಾರಿಕೆ ಪ್ರದೇಶ ಅರ್ಕಾವತಿ ಕ್ಯಾಚ್ಮೆಂಟ್ ಏರಿಯ ಪ್ರದೇಶವಾಗಿದೆ. ಈ ಪ್ರದೇಶದಿಂದ ಮನಗೊಂಡನಹಳ್ಳಿ, ರಾಮನಾಥಪುರ ಮತ್ತು ಅರುವನಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿದೆ. ನೀರು ಹರಿಯುವ ಕಾಲುವೆ ಮತ್ತು ಗ್ರಾಮಗಳನ್ನು ರಾಜ್ಯ ಸರ್ಕಾರ ಕಾವೇರಿ ನೀರಾವರಿ ಯೋಜನೆಗೆ ಸೇರಿಸಿದ್ದು, 2010-2011ನೇ ಸಾಲಿನಲ್ಲಿ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.