ಬಂಡಿಗಳ ಜಾತ್ರೆ, ಭಂಡಾರದ ಜಾತ್ರೆ ಎಂದೇ ಪ್ರಸಿದ್ಧವಾದ ಸವದತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿನ ಭಾರತ ಹುಣ್ಣಿಮೆಯ ಜಾತ್ರೆ ಬಳೆಗಳ ಜಾತ್ರೆ ಎಂದೂ ಜನಜನಿತ. ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಪೀಠ ಯಲ್ಲಮ್ಮನಗುಡ್ಡ. ಇಲ್ಲಿ ಶನಿವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ ಪ್ರವಾಹೋಪಾದಿಯಲ್ಲಿ ಭಕ್ತರ ದಂಡು ಹರಿದುಬಂದಿತ್ತು. ಮಲಪ್ರಭೆ ಮಡಿಲಲ್ಲಿ ಭಕ್ತಿಯ ಹೊಳೆಯೇ ಹರಿಯಿತು.