ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಇ: ಚೈತನ್ಯ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

Published 25 ಏಪ್ರಿಲ್ 2024, 15:10 IST
Last Updated 25 ಏಪ್ರಿಲ್ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮೇನ್ಸ್‌) ಶ್ರೀ ಚೈತನ್ಯ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಅನಿಮೇಶ್ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ (ಎಐಆರ್‌) ಎರಡನೇ ರ್‍ಯಾಂಕ್ ಪಡೆದರೆ, ಮನೋಜ್ ಸೋಹನ್ ಗಜುಲಾ 96, ಅರ್ಮಾನ್ ಸಿಂಗಲ್ 542, ಆಯುಷ್ ರೈ 552, ಚಿರಾಗ್ ವಿ. ಗೌಡ 572, ಜಗದೀಶ್ ರೆಡ್ಡಿ ಎಂ. 668, ರೋಹಿತ್ ರಾಜೀವ್ ನಂಬಿಯಾರ್ 696, ವೇದ್ ಬನ್ಸಾಲ್ 701, ಎಂ. ಲಿಲಿತ್ ಚಂದನ್ 736, ಶಶಾಂಗ್ ಡಿ.ಆರ್. 738, ಆಕಾಶ್ ಕುಮಾರ್ 757, ಆದಿತ್ಯ ಎ. 796, ರಾಹುಲ್ ರಾವ್ 809, ಗೌತಮ್ ತಥಾಂಡ 824 ಹಾಗೂ ಆಯುಷ್ ಅಗರ್ವಾಲ್ 836 ರ್‍ಯಾಂಕ್ ಪಡೆದಿದ್ದಾರೆ. 

ಸಂಸ್ಥೆಯ 15 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್ ಪಡೆದರೆ, 810 ಅಭ್ಯರ್ಥಿಗಳು ‘ಜೆಇಇ ಅಡ್ವಾನ್ಸ್ಡ್‌’ಗೆ ಅರ್ಹತೆ ಪಡೆದಿದ್ದಾರೆ. ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸುಷ್ಮಾ ಬೊಪ್ಪನಾ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಎಂದು ಬೆಂಗಳೂರಿನ ಶ್ರೀ ಚೈತನ್ಯ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ವಿ. ಸತೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಮಾನ್ ಸಿಂಘಾಲ್
ಅರ್ಮಾನ್ ಸಿಂಘಾಲ್
ಆಯುಷ್ ರೈ
ಆಯುಷ್ ರೈ
ರೋಹಿತ್ ರಾಜೀವ್ ನಂಬಿಯಾರ್
ರೋಹಿತ್ ರಾಜೀವ್ ನಂಬಿಯಾರ್
ಜಗದೀಶ್ ರೆಡ್ಡಿ ಎಂ.
ಜಗದೀಶ್ ರೆಡ್ಡಿ ಎಂ.
ಮನೋಜ್ ಸೋಹನ್ ಗಜುಲಾ
ಮನೋಜ್ ಸೋಹನ್ ಗಜುಲಾ
ಅನಿಮೇಶ್ ಸಿಂಗ್ ರಾಥೋಡ್‌
ಅನಿಮೇಶ್ ಸಿಂಗ್ ರಾಥೋಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT