ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಅಧ್ಯಕ್ಷ ದೊಡ್ಡಸಿದ್ದ ಮಾತನಾಡಿ, ‘ಮೆಂದಾರೆ ಗ್ರಾಮದವರು ಶುಕ್ರವಾರ ಮತದಾನ ಮಾಡಲು ಇಂಡಿಗನತ್ತ ಬೂತ್ಗೆ ತೆರಳಿದ್ದು, ಈ ಸಂದರ್ಭದಲ್ಲಿ ಮತ ಹಾಕಬಾರದು ಎಂದು ಬುಡಕಟ್ಟು ಜನಾಂಗಯೇತರರು ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ. ಇದರಿಂದ ಸಮುದಾಯದ ಹಲವರು ಗಾಯಗೊಂಡಿದ್ದಾರೆ. ಕೆಲವರಿಗೆ ತೀವ್ರವಾಗಿ ಏಟು ಬಿದ್ದಿದ್ದು, ಅಂಗವಿಕಲರಾಗುವವ ಸಾಧ್ಯತೆಯೂ ಇದೆ’ ಎಂದು ದೂರಿದರು.