ರೇಷ್ಮಾ ಅವರು ಸೋಮವಾರ ಪುತ್ರಿಯೊಂದಿಗೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ತೆರಳುವ ಬಸ್ಸನ್ನೇರಿದ್ದರು. ಬಸ್ ಟಿಕೆಟ್ ಮಾಡುವ ವೇಳೆ ಚಾಲಕನಿಗೆ ಉಚಿತ ಪ್ರಯಾಣಕ್ಕಾಗಿ ಬ್ಯಾಗಿನಿಂದ ಆಧಾರ್ ಕಾರ್ಡ್ ತೆಗೆದು ತೋರಿಸುವ ವೇಳೆ ಬ್ಯಾಗಿನೊಳಗಿದ್ದ ಚಿನ್ನಾಭರಣವಿದ್ದ ಪರ್ಸ್ ಕಳವಾಗಿರುವುದು ಅವರ ಗಮನಕ್ಕೆ ಬಂತು. ಈ ವಿಚಾರವನ್ನು ಅವರು ಬಸ್ ನಿರ್ವಾಹಕರ ಗಮನಕ್ಕೆ ತಂದು ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಈ ಕುರಿತು ವಿಚಾರಿಸದರೂ ಪ್ರಯೋಜನವಾಗಿಲ್ಲ. ಬಳಿಕ ಪರ್ಸ್ ಕಳವಾಗಿರುವ ಕುರಿತು ಪುತ್ತೂರು ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದರು.