‘ಪತ್ನಿ ಜಯಮಾಲಾ ಹೆಸರಿನಲ್ಲಿ ಒಪ್ಪಂದದ ಮೂಲಕ ಸೂತ್ರಬೆಟ್ಟು ನಿವಾಸಿ ಶಶಿಕಲಾ ರೈ ಅವರಿಂದ ಜಾಗವನ್ನು ಖರೀದಿಸಿದ್ದು, ಪ್ರಸ್ತುತ ಮನೆಯು ಪತ್ನಿ ಜಯಮಾಲಾ ಹೆಸರಿನಲ್ಲಿದ್ದು, ನಮ್ಮ ಸ್ವಾಧೀನದಲ್ಲಿದೆ. ಈ ನಡುವೆ ನಮಗೆ ಮತ್ತು ಶಶಿಕಲಾ ಅವರಿಗೆ ಜಾಗದ ವಿಚಾರದಲ್ಲಿ ತಕರಾರು ಉಂಟಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಪತ್ನಿ ಜಯಮಾಲಾ ಅವರು ಅನಾರೋಗ್ಯದಿಂದ ಪಂಜದಲ್ಲಿರುವ ತವರು ಮನೆಗೆ ಹೋಗಿದ್ದು, ಈ ಮಧ್ಯೆ ಮಾರ್ಚ್ 9ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿಗಳು ಮನೆಯನ್ನು ಕೆಡವಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.