ಹೋರಾಟ, ಪ್ರತಿಭಟನೆ, ಚುನಾವಣಾ ಪ್ರಚಾರ ಸಭೆ, ಮಕ್ಕಳ ನಾಟಕ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಏಕೈಕ ತಾಣವಾಗಿ ರಂಗ ಮಂದಿರ ಗುರುತಿಸಿಕೊಂಡಿತ್ತು. ಇದೀಗ ಬಿ.ಸಿ.ರೋಡು-ಕೈಕುಂಜೆ ರಸ್ತೆ ವಿಸ್ತರಣೆಗೊಂಡಿದ್ದು, ಇಲ್ಲಿ ರಂಗಮಂದಿರ ಪುನರ್ ನಿರ್ಮಿಸುವ ಬದಲಾಗಿ ಪಿಂಕ್ ಶೌಚಾಲಯ ನಿರ್ಮಿಸುತ್ತಿದ್ದಾರೆ. ಮಿನಿ ವಿಧಾನಸೌಧ ಎದುರು ಶೌಚಾಲಯಕ್ಕೆ ತೆರಳಲು ಮಹಿಳೆಯರು ಕೂಡಾ ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಸ್ಥಳೀಯ ಮಹಿಳೆಯರು ಮತ್ತು ನಾಗರಿಕರಿಂದ ಸಹಿ ಸಂಗ್ರಹಿಸಿದ ಪ್ರತ್ಯೇಕ ಎರಡು ಮನವಿಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ’ ಎಂದು ಹೋರಾಟಗಾರ ಲೋಹಿತ್ ಭಂಡಾರಿಬೆಟ್ಟು ತಿಳಿಸಿದರು.