ರಾಜ್ಯದ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಹರಿಹರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮೈಸೂರು, ಧರ್ಮಸ್ಥಳ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಶಿವಮೊಗ್ಗ, ಹರಪನಹಳ್ಳಿ, ಹೊಸಪೇಟೆ, ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಹಿರೇಕೆರೂರು, ಶಿಕಾರಿಪುರ ಮತ್ತಿತರ ಕಡೆ ತೆರಳುವವರಿಗೆ ಜಂಕ್ಷನ್ನಂತಿದ್ದು, ಹಗಲು ಮತ್ತು ರಾತ್ರಿ ವೇಳೆಯಲ್ಲೂ ಪ್ರಯಾಣಿಕರಿಂದ ತುಂಬಿರುತ್ತದೆ. ನಿಲ್ದಾಣದ ಆವರಣದೊಳಕ್ಕೆ ಬರುವ ಬಸ್ಗಳನ್ನು ಪ್ಲಾಟ್ಫಾರಂನಲ್ಲಿ ನಿಲ್ಲಲೂ ಬಿಡದೆ ಸೀಟು ಹಿಡಿಯಲು ಜನ ಮುಗಿ ಬೀಳುತ್ತಿದ್ದಾರೆ.